Home ದಾವಣಗೆರೆ ಗೋದಾವರಿ ನದಿಗೆ ಹಾರಿದ ಒಂದೇ ಕುಟುಂಬದ ನಾಲ್ವರು, ತಾಯಿ ರಕ್ಷಣೆ: ಪತ್ತೆಯಾಗಿಲ್ಲ ತಂದೆ, ಇಬ್ಬರು ಮಕ್ಕಳು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಗೋದಾವರಿ ನದಿಗೆ ಹಾರಿದ ಒಂದೇ ಕುಟುಂಬದ ನಾಲ್ವರು, ತಾಯಿ ರಕ್ಷಣೆ: ಪತ್ತೆಯಾಗಿಲ್ಲ ತಂದೆ, ಇಬ್ಬರು ಮಕ್ಕಳು!

Share
ಗೋದಾವರಿ
Share

ಆಂಧ್ರಪ್ರದೇಶ: ಆರ್ಥಿಕ ಸಂಕಷ್ಟದಿಂದ ಮನನೊಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಗೋದಾವರಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ ವಸಿಷ್ಠ ಗೋದಾವರಿ ಸೇತುವೆಯ ಬಳಿ ನಡೆದಿದೆ.

ವರದಿಗಳ ಪ್ರಕಾರ, ತನುಕು ಪಟ್ಟಣದಲ್ಲಿ ಕಿರಾಣಿ ಅಂಗಡಿ ಮತ್ತು ಹಾಲಿನ ವ್ಯಾಪಾರ ನಡೆಸುತ್ತಿದ್ದ ನಂಬೂರಿ ಶ್ರೀನಿವಾಸ್ (45), ಅವರ ಪತ್ನಿ ನಂಬೂರಿ ಪದ್ಮಿಣಿ (42), ಮಗ ಈಶ್ವರ್/ವೆಂಕಟೇಶ್‌ (16) ಹಾಗೂ ಮಗಳು ನಿತ್ಯಾ (15) ಎಂಬುವವರೇ ಈ ನಿರ್ಧಾರ ಕೈಗೊಂಡ ಕುಟುಂಬದ ಸದಸ್ಯರು. ಈ ಕುಟುಂಬವು ಎರಡು ದ್ವಿಚಕ್ರ ವಾಹನಗಳಲ್ಲಿ ತನುಕು ನಗರದಿಂದ ಚಿಂಚಿನಾಡ ಸೇತುವೆಗೆ ಬಂದು, ಅಲ್ಲಿಂದ ನದಿಗೆ ಹಾರಿದ್ದಾರೆ.

ಅಲ್ಲಿಯೇ ಸಮೀಪದಲ್ಲಿದ್ದ ಸ್ಥಳೀಯ ಮೀನುಗಾರರು ತಕ್ಷಣವೇ ಸ್ಪಂದಿಸಿ ಪದ್ಮಿಣಿ ಅವರ ಜೀವವನ್ನು ರಕ್ಷಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ನೀರಿನ ರಭಸಕ್ಕೆ ಕೊಚ್ಚಿಹೋದ ತಂದೆ ಶ್ರೀನಿವಾಸ್ ಹಾಗೂ ಇಬ್ಬರು ಮಕ್ಕಳು ನದಿಯಲ್ಲಿ ಕಾಣೆಯಾಗಿದ್ದಾರೆ.

ಸಂಘಟನೆಯ ಮಾಹಿತಿ ಪಡೆದ ಪೊಲೀಸರು ಮತ್ತು ರಕ್ಷಣಾ ಪಡೆಗಳ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ನದಿಯಲ್ಲಿ ಕಾಣೆಯಾದ ಮೂವರಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿವೆ. ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಸಾಲದ ಹೊರೆ ಹೆಚ್ಚಾಗಿದ್ದರಿಂದ ಕುಟುಂಬ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles