Home ಕ್ರೈಂ ನ್ಯೂಸ್ ಅತ್ತೆ ಅಂತಿಮ ಆಸೆ ಈಡೇರಿಕೆ: ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲು ಕೊಟ್ಟು ಸಾಂಪ್ರದಾಯಿಕ ಕಟ್ಟುಪಾಡು ಮುರಿದ ಸೊಸೆಯಂದಿರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅತ್ತೆ ಅಂತಿಮ ಆಸೆ ಈಡೇರಿಕೆ: ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲು ಕೊಟ್ಟು ಸಾಂಪ್ರದಾಯಿಕ ಕಟ್ಟುಪಾಡು ಮುರಿದ ಸೊಸೆಯಂದಿರು!

Share
ಅತ್ತೆ
Share

ಲೂಧಿಯಾನ (ಪಂಜಾಬ್): ಲಿಂಗ ತಾರತಮ್ಯ ಮತ್ತು ಶತಮಾನಗಳ ಹಳೆಯ ಮೂಢನಂಬಿಕೆಯ ಕಟ್ಟುಪಾಡುಗಳನ್ನು ಬದಿಗೊತ್ತಿ, ಪಂಜಾಬ್‌ನ ಲೂಧಿಯಾನ ಜಿಲ್ಲೆಯ ಪ್ರತಾಪ್ ಸಿಂಗ್ ವಾಲಾ ಗ್ರಾಮದಲ್ಲಿ ಇಬ್ಬರು ಸೊಸೆಯಂದಿರು ತಮ್ಮ ಅತ್ತೆಯ ಅಂತಿಮ ಯಾತ್ರೆಯಲ್ಲಿ ಪಾಡೆಗೆ  ಹೆಗಲು ಕೊಡುವ ಮೂಲಕ ಸಮಾಜಕ್ಕೆ ಹೊಸ ಸಂದೇಶ ನೀಡಿದ್ದಾರೆ.

ಗ್ರಾಮದ ನಿವಾಸಿ ಸುಖ್‌ದೇವ್ ಕೌರ್ (70) ಅವರು ಹೃದಯಾಘಾತದಿಂದ ನಿಧನರಾದರು. ಅಂತಿಮ ಸಂಸ್ಕಾರದ ವೇಳೆಯಲ್ಲಿ ಮೃತಳ ಸೊಸೆಯಂದಿರಾದ ಮನ್‌ಪ್ರೀತ್ ಕೌರ್ ಮತ್ತು ರಾಜ್‌ವೀರ್ ಕೌರ್ ಮುಂದೆ ನಿಂತು ಅತ್ತೆಯ ಪಾಡೆಯನ್ನು ಹೆಗಲ ಮೇಲೆ ಹೊತ್ತು ಸಾಗಿದರು. ಇವರಿಗೆ ಬೆಂಬಲವಾಗಿ ಮೃತಳ ಪುತ್ರರಾದ ಯಾದವಿಂದರ್ ಸಿಂಗ್ ಹಾಗೂ ಗುರ್ವಿಂದರ್ ಸಿಂಗ್ ಹಿಂಭಾಗದಿಂದ ಹೆಗಲು ನೀಡಿದರು. ಸಾಂಪ್ರದಾಯಿಕವಾಗಿ ಪುರುಷರು ಮಾತ್ರ ಅಂತಿಮ ಯಾತ್ರೆಯ ನೇತೃತ್ವ ವಹಿಸುವ ಪದ್ಧತಿಯನ್ನು ಮುರಿದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಕಣ್ಣು ಮತ್ತು ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ:

ಸುಖ್‌ದೇವ್ ಕೌರ್ ಅವರು ಸುಮಾರು 10 ವರ್ಷಗಳ ಹಿಂದೆಯೇ ತಮ್ಮ ದೇಹ ಹಾಗೂ ಕಣ್ಣುಗಳನ್ನು ವೈದ್ಯಕೀಯ ಸಂಶೋಧನೆಗೆ ದಾನ ಮಾಡಲು ಸಂಕಲ್ಪ ಮಾಡಿದ್ದರು. ಅದಕ್ಕಾಗಿ ಕುಟುಂಬಸ್ಥರು ಕೂಡ ಅಫಿಡವಿಟ್ ಸಲ್ಲಿಸಿ ಬೆಂಬಲ ವ್ಯಕ್ತಪಡಿಸಿದ್ದರು.
ಮರಣದ ತಕ್ಷಣವೇ ಅವರ ಪುತ್ರರು ‘ಡಾ. ರಮೇಶ್ ಸೂಪರ್‌ಸ್ಪೆಷಾಲಿಟಿ ಐ & ಲೇಸರ್ ಸೆಂಟರ್’ ವೈದ್ಯರ ತಂಡಕ್ಕೆ ಕರೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ವೈದ್ಯರು ಅವರ ನೇತ್ರಗಳನ್ನು ಸಂಗ್ರಹಿಸಿ, ಅಂಧರ ಬಾಳಿಗೆ ಬೆಳಕಾಗಲು ನೆರವಾದರು.
ಅದರ ಬೆನ್ನಲ್ಲೇ, ಫಿರೋಜ್‌ಪುರದ ‘ಹಾರ್ಮನಿ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ’ ತಂಡವು ಲೂಧಿಯಾನಗೆ ಆಗಮಿಸಿ, ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗಾಗಿ ಅವರ ಭೌತಿಕ ಶರೀರವನ್ನು ಗೌರವಪೂರ್ವಕವಾಗಿ ಸ್ವೀಕರಿಸಿತು. ಹೂವುಗಳಿಂದ ಅಲಂಕರಿಸಲ್ಪಟ್ಟ ಆಂಬ್ಯುಲೆನ್ಸ್‌ಗೆ ಗ್ರಾಮದ ಸರ್ಪಂಚ್ ಗುರ್ಮೇಜ್ ಸಿಂಗ್ ಚಾಲನೆ ನೀಡಿ ಅಂತಿಮ ಬೀಳ್ಕೊಡುಗೆ ನೀಡಿದರು.
Share

Leave a comment

Leave a Reply

Your email address will not be published. Required fields are marked *

Related Articles