ಕೊಲ್ಕತ್ತಾ: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಅವರ 24 ವರ್ಷದ ಮಗನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಬೆಂಗಾಲ್ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯ ಹಾಗೂ ನದಿಯಾ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನೀಸುರ್ ರೆಹಮಾನ್ (50) ಮತ್ತು ಅವರ ಪುತ್ರ ಅಬು ಸುಫಿಯಾನ್ (24) ಹತ್ಯೆಗೊಳಗಾದ ದುರದೃಷ್ಟಕರ ತಂದೆ-ಮಗ.
ಶನಿವಾರ ಇವರಿಬ್ಬರೂ ಬೆತುಆದಹರಿಯಿಂದ ಕಾರಿನಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ನಗಡಿ ರೈಲ್ವೆ ಗೇಟ್ ಬಳಿ ಅಪರಿಚಿತ ದುಷ್ಕರ್ಮಿಗಳ ತಂಡ ಕಾರನ್ನು ತಡೆದು ಅಂಧಾಧುಂಧ ಗುಂಡಿನ ದಾಳಿ ನಡೆಸಿದೆ.
ಬಬಿಕಿಕ ಕಾರಿನ ಮೇಲೆ ಫೈರಿಂಗ್ ನಡೆಸಿದ ದುಷ್ಕರ್ಮಿಗಳು, ನಂತರ ತೀಕ್ಷ್ಣ ಮಾರಕಾಸ್ತ್ರಗಳಿಂದ ತಂದೆ-ಮಗನ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿ ಇಬ್ಬರೂ ಮೃತಪಟ್ಟಿದ್ದಾರೆ. ಈ ಘಟನೆಯಿಂದ ನಕಾಶಿಪಾರಾ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಈ ಭೀಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ತೃಣಮೂಲ ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Abu Sufiyan murder
- Adhir Ranjan Chowdhury
- Anisur Rahman
- Anisur Rahman shot dead
- Bengal violence
- Nadia district crime
- West Bengal Congress leader murder
- West Bengal News
- ಅಧೀರ್ ರಂಜನ್ ಚೌಧರಿ
- ಅನೀಸುರ್ ರೆಹಮಾನ್ ಹತ್ಯೆ
- ಅಬು ಸುಫಿಯಾನ್
- ಕಾಂಗ್ರೆಸ್ ನಾಯಕ ಮಗನ ಹತ್ಯೆ
- ನದಿಯಾ ಜಿಲ್ಲೆ ಗುಂಡಿನ ದಾಳಿ
- ಪಶ್ಚಿಮ ಬಂಗಾಳ ಕಾಂಗ್ರೆಸ್ ನಾಯಕ ಕೊಲೆ
- ಬಂಗಾಳ ಕ್ರೈಮ್ ನ್ಯೂಸ್





Leave a comment