Home ಕ್ರೈಂ ನ್ಯೂಸ್ “ದೃಶ್ಯಂ” ಸಿನಿಮಾ ಶೈಲಿಯಲ್ಲಿ ಪತಿ ಕೊಲೆಗೆ ಯತ್ನ: ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ, ಬ್ಯಾಟ್‌ನಿಂದ ಥಳಿಸಿ ಮನೆಯಲ್ಲೇ ಹೂತುಹಾಕಲು ಯತ್ನಿಸಿದ ಪತ್ನಿ ಸಿಕ್ಕಿಬಿದ್ದಿದ್ದೇ ರೋಚಕ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ದೃಶ್ಯಂ” ಸಿನಿಮಾ ಶೈಲಿಯಲ್ಲಿ ಪತಿ ಕೊಲೆಗೆ ಯತ್ನ: ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ, ಬ್ಯಾಟ್‌ನಿಂದ ಥಳಿಸಿ ಮನೆಯಲ್ಲೇ ಹೂತುಹಾಕಲು ಯತ್ನಿಸಿದ ಪತ್ನಿ ಸಿಕ್ಕಿಬಿದ್ದಿದ್ದೇ ರೋಚಕ!

Share
ದೃಶ್ಯಂ
Share

ಬಾರಾಮತಿ (ಮಹಾರಾಷ್ಟ್ರ): ಮಲಯಾಳಂ, ಕನ್ನಡ ಹಾಗೂ ಬಾಲಿವುಡ್ ನ ‘ದೃಶ್ಯಂ’ ಸಿನಿಮಾ ಶೈಲಿಯಿಂದ ಪ್ರೇರಿತನಾಗಿ, ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದ 38 ವರ್ಷದ ಮಹಿಳೆಯನ್ನು ಮಹಾರಾಷ್ಟ್ರದ ಬಾರಾಮತಿ ಪೊಲೀಸರು ಬಂಧಿಸಿದ್ದಾರೆ.

ಪತಿಗೆ ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ, ಬ್ಯಾಟ್‌ನಿಂದ ಹೊಡೆದು ಮನೆಯಲ್ಲಿ ಕಟ್ಟಿಸಿದ ಸಿಮೆಂಟ್ ಚೇಂಬರ್‌ನಲ್ಲಿ ಹೂತುಹಾಕಲು ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಬಾರಾಮತಿಯ ಇಂದ್ರಪ್ರಸ್ಥ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಜುಲೈ 30 ರಂದು ಆರೋಪಿ ಶರ್ಮಿಳಾ ಪ್ರವೀಣ್ ಜಗತಾಪ್ ಎಂಬಾಕೆ ತನ್ನ ಪತಿ ಪ್ರವೀಣ್ ಜಗತಾಪ್ ಅವರಿಗೆ ಜ್ಯೂಸ್‌ನಲ್ಲಿ ಭಾರಿ ಪ್ರಮಾಣದ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು. ಇದರಿಂದ ಪ್ರವೀಣ್ ಎರಡು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.

ಆಗಸ್ಟ್ 1 ರಂದು ಪತಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಶರ್ಮಿಳಾ ಕ್ರಿಕೆಟ್ ಬ್ಯಾಟ್‌ನಿಂದ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾಳೆ. ಬಳಿಕ ಮನೆಯ ಗ್ಯಾಲರಿಯಲ್ಲಿ ಕಾರ್ಮಿಕರ ಮೂಲಕ ವಿಟಾ-ಸಿಮೆಂಟ್‌ನಿಂದ ವಿಶೇಷವಾಗಿ ನಿರ್ಮಿಸಲಾಗಿದ್ದ ಚೇಂಬರ್‌ಗೆ (ಹೊಂಡ) ಪತಿಯನ್ನು ಹಾಕಿ, ಮೇಲೆ ಕಡಪ ಕಲ್ಲಿನ ಚಪ್ಪಡಿಯನ್ನು ಮುಚ್ಚಿ ಹೂತುಹಾಕಲು ಯತ್ನಿಸಿದ್ದಾಳೆ.

ಕಾರ್ಮಿಕರ ಸಮಯಪ್ರಜ್ಞೆಯಿಂದ ಉಳಿದ ಜೀವ:

ಕಲ್ಲಿನ ಚಪ್ಪಡಿ ಮುಚ್ಚುವಾಗ ಹೊಂಡದ ಒಳಗಿದ್ದ ಪ್ರವೀಣ್ ಕೈ-ಕಾಲು ಅಲ್ಲಾಡಿಸುವುದನ್ನು ಕಂಡ ಕಾರ್ಮಿಕರು ಅನುಮಾನಗೊಂಡು ತಕ್ಷಣವೇ ಪೊಲೀಸರಿಗೆ (Emergency 112) ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಪ್ರವೀಣ್ ಅವರ ಸಹೋದರ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪತಿಯ ಗಂಭೀರ ಆರೋಪಗಳು:

ಮಾಟಮಂತ್ರದ ಶಂಕೆ: ಘಟನೆಯ ಹಿಂದೆ ಮಾಟಮಂತ್ರ ಅಥವಾ ಕ್ಷುದ್ರಪೂಜೆಯ ಕೋನವಿರಬಹುದು ಎಂದು ಪ್ರವೀಣ್ ಶಂಕಿಸಿದ್ದಾರೆ. ಅಮಾವಾಸ್ಯೆಯ ದಿನಗಳಾದ ಜುಲೈ 13 ಮತ್ತು 14 ರಂದು ಪತ್ನಿ ಕ್ಯಾಲೆಂಡರ್‌ನಲ್ಲಿ ‘No Result’ ಎಂದು ಬರೆದಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

ಮೆಡಿಕಲ್ ಸ್ಟೋರ್ ವಿರುದ್ಧ ಕ್ರಮ: ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಅಷ್ಟೊಂದು ಪ್ರಮಾಣದ ಪ್ರಬಲ ನಿದ್ರೆ ಮಾತ್ರೆ ನೀಡಿದ ಮೆಡಿಕಲ್ ಸ್ಟೋರ್ ಲೈಸೆನ್ಸ್ ರದ್ದುಗೊಳಿಸಬೇಕೆಂದು ಪ್ರವೀಣ್ ಆಗ್ರಹಿಸಿದ್ದಾರೆ.

ಮಕ್ಕಳ ಸುರಕ್ಷತೆ ಕಳವಳ: ತಮ್ಮ ಇಬ್ಬರು ಮಕ್ಕಳನ್ನು ಪತ್ನಿಯ ಪೋಷಕರು ಕರೆದೊಯ್ದಿದ್ದು, ಅವರ ಜೀವಕ್ಕೆ ಅಪಾಯವಿದೆ ಎಂದು ಪ್ರವೀಣ್ ಆತಂಕ ವ್ಯಕ್ತಪಡಿಸಿದ್ದು, ಮಕ್ಕಳ ಕಸ್ಟಡಿಯನ್ನು ತಮಗೆ ವಹಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.