Home ಕ್ರೈಂ ನ್ಯೂಸ್ ನಿತಿನ್ ಗಡ್ಕರಿ ವಿರುದ್ಧ ಗರಂ: E20 ಪೆಟ್ರೋಲ್ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಹೊರಟ ಪೂನಾವಾಲ ವಶಕ್ಕೆ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನಿತಿನ್ ಗಡ್ಕರಿ ವಿರುದ್ಧ ಗರಂ: E20 ಪೆಟ್ರೋಲ್ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಹೊರಟ ಪೂನಾವಾಲ ವಶಕ್ಕೆ

Share
ನಿತಿನ್ ಗಡ್ಕರಿ
Share

ನವದೆಹಲಿ: ಕೇಂದ್ರ ಸರ್ಕಾರದ E20 ಪೆಟ್ರೋಲ್ ನೀತಿ ಹಾಗೂ ನಿತಿನ್ ಗಡ್ಕರಿ ಅವರ ವಿರುದ್ಧ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನಾ ಮೆರವಣಿಗೆ ಘೋಷಿಸಿದ್ದ ಪ್ರಮುಖ ಸಾಮಾಜಿಕ ಕಾರ್ಯಕರ್ತ ತೆಹಸೀನ್ ಪೂನಾವಾಲ ಅವರನ್ನು ದೆಹಲಿ ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ.

ಶನಿವಾರ ಗಾಂಧಿ ಸ್ಮೃತಿಗೆ ಏಕಾಂಗಿಯಾಗಿ ಪಾದಯಾತ್ರೆ ನಡೆಸಿ, ಮೌನ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ಪೂನಾವಾಲ ಯೋಜಿಸಿದ್ದರು.

ಆದರೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಭೀತಿಯಿಂದ ದೆಹಲಿ ಪೊಲೀಸರು ಅವರ ಮನೆಗೆ ಭೇಟಿ ನೀಡಿ ಬಂಧನದಲ್ಲಿರಿಸಿದ್ದಾರೆ.

ಪೂನಾವಾಲ ಆರೋಪವೇನು?”ಯಾವುದೇ ಅಧಿಕೃತ ನೋಟಿಸ್ ಅಥವಾ ದಾಖಲೆಗಳಿಲ್ಲದೆ ಪೊಲೀಸರು ನನ್ನನ್ನು ಗೃಹ ಬಂಧನದಲ್ಲಿಟ್ಟಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ 15 ದಿನಗಳಿರುವಾಗ ಈ ರೀತಿ ವಶಕ್ಕೆ ಪಡೆಯಲಾಗುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಥೆನಾಲ್ ವಿಚಾರದಲ್ಲಿ ಭಯಗೊಂಡಿದ್ದಾರೆ” ಎಂದು ತೆಹಸೀನ್ ಪೂನಾವಾಲ ವಿಡಿಯೋ ಹಂಚಿಕೊಂಡು ಕಿಡಿಕಾರಿದ್ದಾರೆ.

E20 ಪೆಟ್ರೋಲ್ विवाद ಮತ್ತು ಸಾರ್ವಜನಿಕರ ಆಕ್ರೋಶ:80% ಪೆಟ್ರೋಲ್ ಮತ್ತು 20% ಎಥೆನಾಲ್ ಮಿಶ್ರಿತ E20 ಇಂಧನದಿಂದಾಗಿ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಮತ್ತು ಎಂಜಿನ್ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸುತ್ತಿದ್ದಾರೆ.

ಇಂಧನ ಆಯ್ಕೆ ಸಾರ್ವಜನಿಕರ ಹಕ್ಕಾಗಿರಬೇಕು. 100% ಶುದ್ಧ ಪೆಟ್ರೋಲ್, E5 ಮತ್ತು E10 ಇಂಧನಗಳನ್ನೂ ಲಭ್ಯವಾಗಿಸಬೇಕು ಎಂಬುದು ಪೂನಾವಾಲ ನೇತೃತ್ವದ ‘ಟೀಮ್ ಭಾರತ್’ ಪ್ರಮುಖ ಬೇಡಿಕೆಯಾಗಿದೆ.

ಸರ್ಕಾರದ ಸ್ಪಷ್ಟನೆ:ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು E20 ಇಂಧನದಿಂದ ಮೈಲೇಜ್‌ನಲ್ಲಿ ಶೇ. 2 ರಿಂದ 6 ರಷ್ಟು ಇಳಿಕೆಯಾಗಬಹುದು ಎಂದು ಒಪ್ಪಿಕೊಂಡಿದ್ದರೂ, ಇದರಿಂದ ಎಂಜಿನ್ ಕಟ್ಟುಹೋಗುವ ಯಾವುದೇ ಸಾಕ್ಷ್ಯಗಳಿಲ್ಲ ಮತ್ತು ಇದು ಶೇ. 30 ರಷ್ಟು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles