ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತವರಿಗೆ ಮರಳಿದ ಹುತಾತ್ಮರ ಪಾರ್ಥಿವ ಶರೀರ

On: December 26, 2024 9:16 AM
Follow Us:
---Advertisement---

ಜಮ್ಮು ಕಾಶ್ಮೀರದ ಪೊಂಛ್ ಅಲ್ಲಿ‌ ನಡೆದ ಭೀಕರ‌ ಅಪಘಾತದಿಂದ ಹುತಾತ್ಮರಾದ ಕರ್ನಾಟಕದ ಸೈನಿಕರ ಪಾರ್ಥಿವ ಶರೀರಗಳನ್ನು ನಿನ್ನೆ ತಡರಾತ್ರಿ ತವರಿಗೆ ತರಲಾಗಿದೆ.

ಇನ್ನೂ ಉಡುಪಿಯ ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರವು ತಡರಾತ್ರಿ 3ಗಂಟೆಯ ನಂತರ ಉಡುಪಿಗೆ ತರಲಾಗಿದ್ದು, ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಶರೀರಗಳನ್ನು ಇರಿಸಲಾಗಿದ್ದು ಇಂದು ಬೆಳಗ್ಗೆ ಕುಂದಾಪುರಕ್ಕೆ ರವಾನೆಯಾಗಿದೆ.

ಇನ್ನೂ ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗವಾಗಿ ಕುಂದಾಪುರದ ಬೀಜಾಡಿವರೆಗೆ ಅನೂಪ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ನೆರವೆರಲಿದ್ದು, ಸುಮಾರು 5000ಸಾವಿರ ಜನಕ್ಕೂ ಭಾಗಿಯಾಗುವ ನಿರೀಕ್ಷೆ ಇದೆ.ಅಂತಿಮ ಯಾತ್ರೆ ಮುಗಿದ ನಂತರ ಹುತಾತ್ಮರ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು.

ಬೀಜಾಡಿ ಗ್ರಾಮದ ಸ್ವಗೃಹದಲ್ಲಿ ಅಂತಿಮ ವಿಧಿ ವಿಧಾನ ನೆರವೇರಲಿದ್ದು ಕುಟುಂಬಸ್ಥರು ಮತ್ತು ಅಪ್ತರಿಗೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥ ಮಾಡಲಾಗಿದೆ, ನಂತರ ಬೀಜಾಡಿ ಪಡು ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕಡಲ ತೀರದಲ್ಲಿ ಅನೂಪ್ ರವರ ಅಂತ್ಯಸಂಸ್ಕಾರ ನಡೆಯಲಿದ್ದು, ಸಮುದ್ರ ತೀರದ ಸರ್ಕಾರಿ ಜಮೀನಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಂತಿಮ ವಿಧಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಸಿಬ್ಬಂದಿ, ಸೇನಾ ಸಿಬ್ಬಂದಿಗಳು ಭಾಗಿಯಾಗಲಿದ್ದು, ಇಂದು ಮಧ್ಯಾಹ್ನ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯುವ ಸಾಧ್ಯತೆಗಳಿವೆ.

Join WhatsApp

Join Now

Join Telegram

Join Now

Leave a Comment