Home ದಾವಣಗೆರೆ ದಾವಣಗೆರೆ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸೋಲಿಸುವ ಹಳೇ ಆಡಿಯೋ ಡಿಕೆಶಿಗೆ ಅಸ್ತ್ರ: ಜಮೀರ್‌ಗೆ ಮಂತ್ರಿ ಪಟ್ಟ ತಪ್ಪಿಸಲು ಸ್ಕೆಚ್..!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸೋಲಿಸುವ ಹಳೇ ಆಡಿಯೋ ಡಿಕೆಶಿಗೆ ಅಸ್ತ್ರ: ಜಮೀರ್‌ಗೆ ಮಂತ್ರಿ ಪಟ್ಟ ತಪ್ಪಿಸಲು ಸ್ಕೆಚ್..!

Share
ದಾವಣಗೆರೆ
Share

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಸೇರ್ಪಡೆ ಹಾಗೂ ಸ್ಥಾನಮಾನಗಳ ಹಂಚಿಕೆಯ ಕಸರತ್ತು ಜೋರಾಗಿರುವ ಬೆನ್ನಲ್ಲೇ, ಆಂತರಿಕ ಭಿನ್ನಮತ ಮತ್ತು ಆಡಿಯೋ ಲೀಕ್ ವಿವಾದವೊಂದು ತೀವ್ರ ಸಂಚಲನ ಮೂಡಿಸಿದೆ.

ದಾವಣಗೆರೆ ಉಪಚುನಾವಣೆ (By-Election) ಸಂದರ್ಭದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಸಚಿವ ಜಮೀರ್ ಅಹಮದ್ ಖಾನ್ ಸ್ಕೆಚ್ ಹಾಕಿದ್ದರು ಎನ್ನಲಾದ ಹಳೆಯ ಆಡಿಯೋ ವಿವಾದ ಈಗ ಮತ್ತೆ ಮುಂಚೂಣಿಗೆ ಬಂದಿದೆ.

ಡಿಕೆಶಿ ಬತ್ತಳಿಕೆಯಿಂದ ಹೊರಬಂತು ಬ್ರಹ್ಮಾಸ್ತ್ರ!

ಅಂದು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರಿಂದ ಜಮೀರ್ ಅಹಮದ್ ಖಾನ್ ಸದ್ಯಕ್ಕೆ ಬಚಾವ್ ಆಗಿದ್ದರು. ಆದರೆ, ಅಂದಿನ ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಭಿನ್ನಮತಿಯ ಮಾತುಕತೆಯ ಸಂಪೂರ್ಣ ಆಡಿಯೋ ರೆಕಾರ್ಡ್ ಹಾಗೂ ವರದಿಯನ್ನು ಹೈಕಮಾಂಡ್‌ಗೆ ಒಪ್ಪಿಸಿದ್ದರು. ಈಗ ಸಂಪುಟ ಪುನಾರಚನೆ ಹಾಗೂ ರಾಜಕೀಯ ಮೇಲಾಟಗಳ ಸಂದರ್ಭದಲ್ಲಿ ಡಿಸಿಎಂ ಹುದ್ದೆಯ ಆಕಾಂಕ್ಷಿಗಳಿಗೆ ಬ್ರೇಕ್ ಹಾಕಲು ಮತ್ತು ಆಂತರಿಕ ಭಿನ್ನಮತವನ್ನು ಶಮನಗೊಳಿಸಲು ಡಿಕೆಶಿ ಈ ಅಸ್ತ್ರವನ್ನು ಬಳಸಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಇಕ್ಕಟ್ಟಿನಲ್ಲಿ ಹೈಕಮಾಂಡ್ – ಸಿದ್ದರಾಮಯ್ಯ ಮೊರೆ ಹೋದ ಜಮೀರ್:

ಆಡಿಯೋ ಲೀಕ್ ವಿವಾದ ಬೆನ್ನತ್ತಿರುವ ಕಾರಣ ಜಮೀರ್ ಅಹಮದ್ ಅವರಿಗೆ ಸಚಿವ ಸ್ಥಾನ ಸಿಗುವುದು ಸದ್ಯಕ್ಕೆ ಕಷ್ಟ ಎಂದು ಹೇಳಲಾಗುತ್ತಿದೆ. ಹೈಕಮಾಂಡ್ ಇವರನ್ನು ಕಡೆಗಣಿಸಲೂ ಆಗದೆ, ಮಂತ್ರಿಪಟ್ಟ ನೀಡಲೂ ಆಗದೆ ದೆಹಲಿಗೆ ಕರೆಸಿ ಚರ್ಚೆ ನಡೆಸಿದೆ. ಇದರಿಂದ ಆತಂಕಗೊಂಡಿರುವ ಜಮೀರ್, ತಮ್ಮ ರಾಜಕೀಯ ಗುರು, ಸಿಎಂ ಸಿದ್ದರಾಮಯ್ಯ ಅವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಆದರೆ, ಮುಸ್ಲಿಂ ಸಮುದಾಯದಲ್ಲಿ ಅವರಿಗಿರುವ ಹಿಡಿತ ಹಾಗೂ ಮಾಸ್ ಅಪೀಲ್ ಹಿನ್ನೆಲೆಯಲ್ಲಿ ಅವರನ್ನು ಸಂಪೂರ್ಣವಾಗಿ ಸೈಡ್‌ಲೈನ್ ಮಾಡುವುದು ಹೈಕಮಾಂಡ್‌ಗೂ ಅಷ್ಟು ಸುಲಭವಲ್ಲ.

ಯು.ಟಿ. ಖಾದರ್ ಅವರಿಗೆ ಒಲಿದ ಅದೃಷ್ಟ?

ಜಮೀರ್ ಅಹಮದ್ ಅವರ ಈ ಹಿನ್ನಡೆಯು ಪ್ರಸ್ತುತ ಸ್ಪೀಕರ್ ಆಗಿರುವ ಯು.ಟಿ. ಖಾದರ್ ಅವರಿಗೆ ವರದಾನವಾಗುವ ಸಾಧ್ಯತೆ ದಟ್ಟವಾಗಿದೆ. ಡಿಕೆಶಿ ಬಣಕ್ಕೂ ಆಪ್ತರಾಗಿರುವ, ವಿವಾದರಹಿತ ನಾಯಕ ಖಾದರ್ ಅವರಿಗೆ ಡಿಸಿಎಂ ಹುದ್ದೆ ಸಿಗದಿದ್ದರೂ, ಮುಂದಿನ ದಿನಗಳಲ್ಲಿ ಅತ್ಯಂತ ಪ್ರಮುಖ ಸಚಿವ ಸ್ಥಾನ ಸಿಗುವ ರೇಸ್‌ನಲ್ಲಿ ಅವರು ಒಂದು ಸ್ಥಾನ ಮುಂಚೂಣಿಗೆ ಬಂದಿದ್ದಾರೆ.

ಒಟ್ಟಾರೆಯಾಗಿ, ಈ ಆಡಿಯೋ ಬಾಂಬ್ ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಯಾರಿಗೆ ಮಂತ್ರಿ ಪಟ್ಟ ತಂದುಕೊಡಲಿದೆ ಮತ್ತು ಯಾರಿಗೆ ಹಿನ್ನಡೆ ಉಂಟುಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share

Leave a comment

Leave a Reply

Your email address will not be published. Required fields are marked *

Related Articles