ದಾವಣಗೆರೆ/ ನವದೆಹಲಿ: ಎಲ್ಪಿಜಿ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಜನರಿಗೆ ತಕ್ಷಣ ಪರಿಹಾರ ದೊರಕುವಂತೆ ಮೋದಿ ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ದೆಹಲಿಯ ಸಂಸತ್ ಭವನದ ಆವರಣದಲ್ಲಿ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಪಾಲ್ಗೊಂಡಿದ್ದರು.
ಸೌದೆಯಿಂದ ಮುಕ್ತ ಭಾರತ ಎಂದು ಗ್ಯಾಸ್ ನೀಡಿದ್ದ ಮೋದಿ. ಇದೀಗ ಸೌದಿ ಯುದ್ಧದಿಂದ ಭಾರತ ಸೌದೆಗೇ ಮರಳುತ್ತಿದೆ ಎಂಬ ಭಿತ್ತಿಪತ್ರ ಹಿಡಿದು ಸಂಸದರು ಪ್ರತಿಭಟನೆ ನಡೆಸಿದರು.
ಮೋದಿ ಸರ್ಕಾರದ ಅವಧಿಯಲ್ಲಿ ಎಲ್ಪಿಜಿ ಗ್ಯಾಸ್ ಕೊರತೆಯಿಂದ ದೇಶವೇ ಕಂಗೆಟ್ಟಿದೆ. ಪ್ರಧಾನಿಯವರು ಟ್ರಂಪ್ ಎದುರು ಶರಣಾಗಿದ್ದರಿಂದ ಸಂಪೂರ್ಣ ದೇಶವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಪರಿಸ್ಥಿತಿ ಅತ್ಯಂತ ದುಸ್ಥಿತಿಯಲ್ಲಿದ್ದು, ಜನರು ಎಲ್ಪಿಜಿ ಸಿಲಿಂಡರ್ ಪಡೆಯಲು ಉದ್ದವಾದ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.
ಜನರಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ, ಸರ್ಕಾರವೂ ಸಮಸ್ಯೆ ಪರಿಹರಿಸಲು ಕಾಣಿಸುತ್ತಿಲ್ಲ. ಎಲ್ಪಿಜಿ ಸಂಕಷ್ಟಕ್ಕೆ ಪರಿಹಾರ ಬೇಕು ಕಾರಣಗಳಲ್ಲ ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರುಗಳು ಹಾಜರಿದ್ದರು.
- Central Government
- DAVANAGERE MP
- Dr. Prabha Mallikarjun
- Gas Cylinder Shortage
- INDIA Alliance
- LPG Crisis
- New Delhi News
- Parliament Protest
- Priyanka Gandhi
- Rahul Gandhi
- ಇಂಡಿಯಾ ಮೈತ್ರಿಕೂಟ
- ಎಲ್ಪಿಜಿ ಸಮಸ್ಯೆ
- ಕೇಂದ್ರ ಸರ್ಕಾರ
- ಗ್ಯಾಸ್ ಸಿಲಿಂಡರ್ ಅಭಾವ
- ಡಾ. ಪ್ರಭಾ ಮಲ್ಲಿಕಾರ್ಜುನ್
- ದಾವಣಗೆರೆ ಸಂಸದರು
- ನವದೆಹಲಿ
- ಪ್ರಿಯಾಂಕಾ ಗಾಂಧಿ
- ರಾಹುಲ್ ಗಾಂಧಿ
- ಸಂಸತ್ ಭವನ ಪ್ರತಿಭಟನೆ





Leave a comment