ದಾವಣಗೆರೆ: ದಾವಣಗೆರೆಯಲ್ಲಿ ಡ್ರಗ್ಸ್, ಅಕ್ಕಿ ಕಳ್ಳ ಸಾಗಣೆ, ಪೊಲೀಸರ ಮೇಲೆ ಹಲ್ಲೆ ಯತ್ನ ಸೇರಿದಂತೆ ಇತರೆ ಬೆಳವಣಿಗೆಗಳು ಪಕ್ಷಕ್ಕೆ ಮುಜುಗರ ತಂದಿರುವುದು ನಿಜ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ತಪ್ಪು ಮಾಡಿದವರ ರಕ್ಷಿಸಲ್ಲ:
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಅಪರಾಧ ಪ್ರಕರಣಗಳು ಮುಜುಗರ ತಂದಿದೆ. ಇದರಲ್ಲಿ ಎರಡು ಮಾತಿಲ್ಲ. ಈ ರೀತಿ ಮಾಡುವವರು ಎಲ್ಲಾ ಪಕ್ಷದಲ್ಲಿಯೂ ಇದ್ದಾರೆ. ನಮ್ಮ ಪಕ್ಷದವರು ಸಿಕ್ಕಿ ಬೀಳುತ್ತಿದ್ದಾರೆ ಎಂದೆನಿಸುತ್ತಿದೆ. ನಾವು ಯಾರನ್ನೂ ಬೆಂಬಲಿಸಿಲ್ಲ. ನಮ್ಮ ಪಕ್ಷದವರೇ ಸಿಕ್ಕಿ ಹಾಕಿಕೊಂಡ ಹಾಗೆ ಕಾಣುತ್ತಿದೆ. ತಪ್ಪು ಮಾಡಿದವರನ್ನು ರಕ್ಷಿಸುವುದಿಲ್ಲ ಎಂದು ಹೇಳಿದರು.
ನಿರ್ದಾಕ್ಷಿಣ್ಯ ಕ್ರಮ ಆಗಬೇಕು:
ಯಾರೇ ತಪ್ಪು ಮಾಡಿದರೂ ತಪ್ಪು. ಅದು ನಮ್ಮ ಪಕ್ಷದಲ್ಲಿ ಗುರುತಿಸಿಕೊಂಡಿರುವವರು ಆಗಬಹುದು. ಬೇರೆ ಪಕ್ಷದವರೂ ಆಗಿರಬಹುದು. ಯಾರೇ ತಪ್ಪು ಮಾಡಿದ್ದರೂ ಪೊಲೀಸ್ ಇಲಾಖೆಯು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು
ಒತ್ತಾಯಿಸಿದರು.
ಬಿಜೆಪಿಗೆ ಟಾಂಗ್:
ರಿಪಬ್ಲಿಕ್ ಆಫ್ ದಾವಣಗೆರೆ ಎಂಬ ಪೋಸ್ಟ್ ಅನ್ನು ಬಿಜೆಪಿಯವರು ಹಂಚಿಕೊಂಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅಕ್ಕಿ ಕಳ್ಳ ಸಾಗಣೆ, ಡ್ರಗ್ಸ್ ಸೇರಿದಂತೆ ಅಪರಾಧ ಚಟುವಟಿಕೆಗಳು ಇಂದು ನಿನ್ನೆಯಿಂದ ನಡೆಯುತ್ತಿಲ್ಲ. ಹಲವಾರು ವರ್ಷಗಳಿಂದಲೂ
ನಡೆಯುತ್ತಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಇವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಲಾಭ ಪಡೆದಿದ್ದರಾ? ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಹಿಡಿಯಲಿಲ್ಲ? ಅವರೊಟ್ಟಿಗೆ ಸೇರಿಕೊಂಡು ಏನಾದ್ರೂ ತಿಂದಿದ್ದರಾ. ನಾವು ಯಾವುದೇ
ಕಾರಣಕ್ಕೂ ಅಪರಾಧಿಗಳ ರಕ್ಷಣೆ ಮಾಡಲು ಹೋಗುವುದಿಲ್ಲ ಎಂದು ಶಿವಗಂಗಾ ಬಸವರಾಜ್ ಹೇಳಿದರು.
ಡ್ರಗ್ಸ್ ಇಂದು ನಿನ್ನೆಯದಲ್ಲ:
ಡ್ರಗ್ಸ್ ಮಾಫಿಯಾ ಸುಮಾರು ವರ್ಷಗಳಿಂದಲೂ ಕಾರ್ಯಾಚರಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾಕೆ ಗಮನಕ್ಕೆ ಬಂದಿಲ್ಲ. ಇಷ್ಟು ವರ್ಷ ಯಾಕೆ ಸುಮ್ಮನಿದ್ದರು? ನಾವು ಅಧಿಕಾರಕ್ಕೆ ಬಂದ ಮೇಲೆ ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸುವ
ಕೆಲಸ ಮಾಡಲಾಗುತ್ತಿದೆ. ಪಕ್ಷಕ್ಕೆ ಶಿಸ್ತು ಮುಖ್ಯ. ಯಾರೇ ಮಾಡಿದರೂ ಕ್ರಮ ತೆಗೆದುಕೊಳ್ಳಬೇಕು. ಪಕ್ಷ ಇಂಥದ್ದನ್ನು ಹೇಳಿಕೊಡಲ್ಲ ಎಂದು ಹೇಳಿದರು.
- Attack on Police
- Channagiri MLA
- Congress Embarrassment
- Davanagere crime news
- Davanagere Drug Case
- Drug Mafia
- Karnataka Politics
- Rice Mafia Karnataka.
- Rice Smuggling
- Shivaganga V Basavaraj
- ಅಕ್ಕಿ ಕಳ್ಳಸಾಗಣೆ
- ಕರ್ನಾಟಕ ರಾಜಕಾರಣ
- ಕಾಂಗ್ರೆಸ್ ಮುಜುಗರ
- ಚನ್ನಗಿರಿ ಶಾಸಕ
- ಡ್ರಗ್ಸ್ ಮಾಫಿಯಾ
- ದಾವಣಗೆರೆ ಕ್ರೈಂ ಸುದ್ದಿ
- ದಾವಣಗೆರೆ ಬಿಜೆಪಿ vs ಕಾಂಗ್ರೆಸ್.
- ಪೊಲೀಸರ ಮೇಲೆ ಹಲ್ಲೆ
- ಶಿವಗಂಗಾ ವಿ ಬಸವರಾಜ್





Leave a comment