Home ಕ್ರೈಂ ನ್ಯೂಸ್ ಹಲ್ಲೆ ನಡೆಸಿದವರ ಮೇಲೆ ರೌಡಿಶೀಟರ್ ಹಾಕಿ ಗಡೀಪಾರು ಮಾಡಿ: ಎಸ್ಪಿ ಉಮಾ ಪ್ರಶಾಂತ್ ರಿಗೆ ಟಿ. ಅಸ್ಗರ್ ಕುಟುಂಬ ಒತ್ತಾಯ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಹಲ್ಲೆ ನಡೆಸಿದವರ ಮೇಲೆ ರೌಡಿಶೀಟರ್ ಹಾಕಿ ಗಡೀಪಾರು ಮಾಡಿ: ಎಸ್ಪಿ ಉಮಾ ಪ್ರಶಾಂತ್ ರಿಗೆ ಟಿ. ಅಸ್ಗರ್ ಕುಟುಂಬ ಒತ್ತಾಯ

Share
ಉಮಾ ಪ್ರಶಾಂತ್
Share

ದಾವಣಗೆರೆ: ತನ್ನ ಮೇಲೆ ಹಲ್ಲೆ ನಡೆಸಿದ ಹಲ್ಲೆಕೋರರ ವಿರುದ್ಧ ರೌಡಿಶೀಟರ್ ಹಾಕಿ ಜಿಲ್ಲೆಯಿಂದ ಗಡೀಪಾರು ಮಾಡಬೇಕು. ಈ ಮೂಲಕ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಟಿ. ಅಸ್ಗರ್ ಹಾಗೂ ಕುಟುಂಬದವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

READ ALSO THIS STORY: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಹಕ್ಕಿದೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಶಿವಗಂಗಾ ಬಸವರಾಜ್

ಕಳೆದ ವರ್ಷದ ನವೆಂಬರ್ 10 ರಂದು ಟಿ. ಅಸ್ಗರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆಸ್ಪತ್ರೆಯಲ್ಲಿ ಎರೆಡು ತಿಂಗಳ ಚಿಕಿತ್ಸೆ ಪಡೆದುಕೊಂಡು ವಾಪಸ್ ಬಂದು ಇಂದು ಎಸ್ಪಿ ಉಮಾ ಪ್ರಶಾಂತ್ ರವರಿಗೆ ಕುಟುಂಬ ಸಮೇತ ಭೇಟಿಯಾಗಿ ಮನವಿ ಸಲ್ಲಿಸಿದರು.

ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ರೌಡಿಶೀಟ್ ಹಾಕಿ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಆರೋಪಿಗಳು ಈ ಹಿಂದೆ ಅನೇಕ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಟಿ. ಅಸ್ಗರ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಾದ ಟಿ. ಜಬೀನ, ಟಿ. ಜಪ್ಪು, ಟಿ. ಅಜ್ಮತ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *