Home ದಾವಣಗೆರೆ ದಾವಣಗೆರೆ ಮರೆಯಲಾಗದ ಮಾಣಿಕ್ಯ ಶಾಮನೂರು ಶಿವಶಂಕರಪ್ಪರ ಅಂತಿಮ ಯಾತ್ರೆಗೆ ಜನಸಾಗರ: ಅಭಿಮಾನಿಗಳ ಕಣ್ಣೀರ ಕಡಲು!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ಮರೆಯಲಾಗದ ಮಾಣಿಕ್ಯ ಶಾಮನೂರು ಶಿವಶಂಕರಪ್ಪರ ಅಂತಿಮ ಯಾತ್ರೆಗೆ ಜನಸಾಗರ: ಅಭಿಮಾನಿಗಳ ಕಣ್ಣೀರ ಕಡಲು!

Share
ಶಾಮನೂರು ಶಿವಶಂಕರಪ್ಪ
Share

SUDDIKSHANA KANNADA NEWS/DAVANAGERE/DATE:15_12_2025

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಚ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಅಂತಿಮ ಯಾತ್ರೆಯು ಆರಂಭಗೊಂಡಿದೆ. ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮುಖಂಡರು, ಹಿತೈಷಿಗಳು, ಸಂಬಂಧಿಕರು ಪಾಲ್ಗೊಂಡಿದ್ದಾರೆ.

ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ನಿವಾಸದಿಂದ ಮೆರವಣಿಗೆಯಲ್ಲಿ ಜನಸಾಗರವೇ ಹರಿದು ಬಂದಿದೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಉದ್ಯಮಿ ಎಸ್. ಎಸ್. ಗಣೇಶ್, ಬಕ್ಕೇಶ್ ಅವರೂ ಸಹ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮೆರವಣಿಗೆ ವೇಳೆ ಭಾವುಕರಾಗಿದ್ದು ಕಂಡು ಬಂತು.

ಪಾರ್ಥಿವ ಶರೀರದ ಮೆರವಣಿಗೆ ಮಾರ್ಗ:

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುುನ್ ಮನೆಯಿಂದ ಸಾಯಿಬಾಬ ದೇವಸ್ಥಾನ, ರೆಡ್ಡಿ ಬಿಲ್ಡಿಂಗ್, ಚರ್ಚ್ ಮುಂಭಾಗ, ರಾಮ್ ಅಂಡ್ ಕೋ ಸರ್ಕಲ್, ಎವಿಕೆ ಕಾಲೇಜು ರಸ್ತೆ, ಮಹಾತ್ಮಾ ಗಾಂಧಿ ಶಾಲೆ, ಹಳೇ ಕೋರ್ಟ್ ರಸ್ತೆ ಮೂಲಕ ಸಾಗಿ ಹೈಸ್ಕೂಲ್ ಮೈದಾನ ತಲುಪಲಿದೆ.

Share

Leave a comment

Leave a Reply

Your email address will not be published. Required fields are marked *