ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬೋಗಸ್ ವರದಿ ಬಿಡಿ, ಸತ್ಯ ತೋರಿಸಿ: ಮಾಧ್ಯಮದವರ ವಿರುದ್ಧ ಬೆಂಕಿಯುಗುಳಿದ ಯತ್ನಾಳ್!

On: February 9, 2025 2:16 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:09-02-2025

ದಾವಣಗೆರೆ: ಮಾಧ್ಯಮಗಳು ಬೋಗಸ್ ವರದಿ ಬಿಡಬೇಕು. ಮಾಧ್ಯಮಗಳ ವಿಶ್ವಾಸರ್ಹತೆ ಕಡಿಮೆಯಾಗುತ್ತಿದೆ. ಸತ್ಯ ತೋರಿಸಿ. ನೀವೂ ವಿಜಯೇಂದ್ರ ಪರ ಇದ್ದೀರಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.

ನಾನು ದೆಹಲಿಗೆ ಹೋದಾಗ ಯಾರು ಸಿಕ್ಕರು, ಯಾರು ಸಿಗಲಿಲ್ಲ ಎಂದು ಯಾಕೆ ಹೇಳಬೇಕು? ಪಕ್ಷದ ವರಿಷ್ಠರು ಭೇಟಿಯಾಗಿದ್ದು ನಿಮಗೇಕೆ ತೋರಿಸಬೇಕು. ನೀವು ನಮ್ಮ ಪರವಾಗಿಲ್ಲ. ವಿಜಯೇಂದ್ರ ಪರವಾಗಿದ್ದೀರಾ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಗುಡುಗಿದರು.

ನಮಗೆ ನಡ್ಡಾ ಬಾಯಿಗೆ ಬಂದಂಗೆ ಬೈದರು. ಕೂರಿಸಲಿಲ್ಲ, ಚಹಾ ಕೊಡಲಿಲ್ಲ, ಯತ್ನಾಳ್ ಟೀಂಗೆ ಭಾರೀ ಮುಖಭಂಗ ಎಂದೆಲ್ಲಾ ಸುದ್ದಿ ಬಂದಿವೆ. ಸತ್ಯ ಹೇಳಿ. ಸುಮ್ಮಸುಮ್ಮನೆ ಸುಳ್ಳು ಹೇಳುತ್ತೀರಾ. ಪೇಯ್ಡ್ ಲೇಖನ ಬರೆಯುವವರು ಇದ್ದಾರೆ. ಯತ್ನಾಳ್ ಗೆ ಅಪಮಾನ ಆಗಿದೆ. ಸೂರ್ಯ ಚಂದ್ರ ಇರುವವರೆಗೆ ವಿಜಯೇಂದ್ರ ರಾಜ್ಯಾಧ್ಯಕ್ಷರು, ಮುಂದಿನ ಮುಖ್ಯಮಂತ್ರಿ ಎಂದು ಬರೆಯುತ್ತೀರಾ. ಕೆಲ ಚಾನೆಲ್ ಗಳ ಬಾಸುಗಳು ವಿಜಯೇಂದ್ರ ಪರ ಇರುತ್ತಾರೆ, ಇದ್ದಾರೆ. ವಿಜಯೇಂದ್ರ
ಪರ ಕೆಲವು ಮಂದಿ ನೀವೂ ಇದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀವೂ ನನ್ನನ್ನು ಟಿವಿಯಲ್ಲಿ ತೋರಿಸುತ್ತಿರಲಿಲ್ಲ. ನನ್ನಿಂದ ಟಿಆರ್ ಪಿ ನಿಮಗೆ ಬರುತ್ತೆ ಎಂಬ ಕಾರಣಕ್ಕೆ ತೋರಿಸುತ್ತೀರಾ. ನೀವು ಗಾಬರಿ ಆಗಬೇಡಿ, ವಿಜಯೇಂದ್ರನನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯುತ್ತಾರೆ ಎಂದು. ಕೆಲ ಚಾನೆಲ್ ಗಳ ಬಾಸ್ ಗಳಿಗೆ
ಹೆದರಿಕೆ ಇದೆ. ಯತ್ನಾಳ್ ಗೆ ಅಪಮಾನ, ಹಿನ್ನಡೆ, ಈ ಗುಂಪಿಗೆ ಮಹತ್ವವೇ ಕೊಡಲಿಲ್ಲ ಎಂದೆಲ್ಲಾ ಸುದ್ದಿ ಬಿತ್ತರಿಸುತ್ತೀರಾ. ನಿಮ್ಮ ಕೆಲಸ ನೀವೂ ಮಾಡಿಕೊಂಡು ಹೋಗಿ, ನಮ್ಮ ಕೆಲಸ ಮಾಡಿಕೊಂಡು ಹೋಗ್ತೇವೆ ಎಂದು ಕಿಡಿಕಾರಿದರು.

ಮತ್ತೆ ಅಪಮಾನ ಖಚಿತ, ವಿಜಯೇಂದ್ರ ಮುಂದುವರಿಕೆ, ಯತ್ನಾಳ್ ಗೆ ನಿರಾಸೆ ಎಂದು ನೀವೂ ಲೇಖನ ಬರೆಯಿರಿ, ಟಿವಿಯಲ್ಲಿ ತೋರಿಸಿ. ನಮ್ಮ ಪ್ರಯತ್ನ ನಡೆಯುತ್ತದೆ. ಭ್ರಷ್ಟಾಚಾರದ ಸಲುವಾಗಿಯೇ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸೋತಿತು. ಬಿಜೆಪಿ ಸರ್ಕಾರ ಬಂತು. ಹಾಲಿ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋದವರನ್ನು ಪಕ್ಷದಿಂದ ದೂರವಿಡಬೇಕು ಎಂಬುದು ನಮ್ಮ ಬೇಡಿಕೆ. ಬೆಡ್ ಶೀಟ್ ಹಾಕಿಕೊಂಡು ಕೇಜ್ರಿವಾಲ್ ಜೈಲಿಗೆ ಹೋದರು. ರಾಜ್ಯದಲ್ಲಿಯೂ ಜೈಲಿಗೆ ಹೋದವರಿದ್ದಾರಲ್ವಾ? ಮಾಧ್ಯಮದವರಿಗೆ ವಿಜಯೇಂದ್ರ ಬೇಕಾಗಿದೆ. ಹಾಗಾಗಿ ಏನೋನೋ ಸುದ್ದಿ ಮಾಡುತ್ತೀರಾ. ಮುಂದುವರಿಸಿಕೊಂಡು ಹೋಗಿ ಎಂದರು.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment