ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

10ಕೆ, 5ಕೆ ಮ್ಯಾರಾಥಾನ್ ಸ್ಪರ್ಧೆಯ ವಿಜೇತರು ಇವರು: ನಗದು ಬಹುಮಾನ, ಮೆಡಲ್, ಪ್ರಶಂಸನಾ ಪತ್ರ ವಿತರಣೆ

On: March 10, 2024 9:41 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:10-03-2024

ದಾವಣಗೆರೆ: ಕರ್ನಾಟಕ ರಾಜ್ಯ ಪೊಲೀಸ್ 50 ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಆಶಯದೊಂದಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ದಾವಣಗೆರೆ ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ 10ಕೆ ಮತ್ತು 5ಕೆ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಸೇರಿದಂತೆ ದಾವಣಗೆರೆ ಜಿಲ್ಲೆಯ ನಾಗರೀಕರು ಹಾಗೂ ದಾವಣಗೆರೆ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿ ಬಾಗವಹಿಸಿದ್ದರು.

ಡಾ.ಕೆ ತ್ಯಾಗರಾಜನ್, ಮಾನ್ಯ ಐಜಿಪಿ ಪೂರ್ವ ವಲಯ, ದಾವಣಗೆರೆ ರವರು ಹಾಗೂ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್, ಪೊಲೀಸ್ ಅಧೀಕ್ಷಕರವರು ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ ಭಾಗವಹಿಸಿ ಪೊಲೀಸ್ ಮತ್ತು ಸಾರ್ವಜನಿಕ ವಿಭಾಗದಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಸೇರಿದಂತೆ ಮೆಡಲ್ ಹಾಗೂ ಪ್ರಶಂಸನಾ ಪತ್ರ ವಿತರಿಸಿದರು.

ಪೊಲೀಸ್ ಪುರುಷ ವಿಭಾಗದ 10k ಮ್ಯಾರಥಾನ್ ಓಟ ಸ್ಪರ್ಧೆ:

ಪ್ರಥಮ : ತಿಮ್ಮರಾಜು ಕೆ ಪಿ, ನ್ಯಾಮತಿ ಪೊಲೀಸ್ ಠಾಣೆ, ದ್ವಿತೀಯ: ಮಲ್ಲಿಕಾರ್ಜುನ, ಡಿಎಆರ್ ದಾವಣಗೆರೆ, ತೃತೀಯ: ಜಯ್ಯಣ್ಣ , ಡಿಎಆರ್ ದಾವಣಗೆರೆ.

ಪೊಲೀಸ್ ಪುರುಷ ವಿಭಾಗದ 5k ಮ್ಯಾರಥಾನ್ ಓಟ:

ಪ್ರಥಮ :ಅಜ್ಜಯ್ಯ, ಬಡಾವಣೆ ಪೊಲೀಸ್ ಠಾಣೆ, ದ್ವಿತೀಯ: ಶ್ರೀಶೈಲ, ಡಿಎಆರ್ ದಾವಣಗೆರೆ, ತೃತೀಯ:ಹೇಮಣ್ಣ & ಮಂಜುನಾಥ.

ಪೊಲೀಸ್ ಮಹಿಳಾ ವಿಭಾಗದ 10k ಮ್ಯಾರಥಾನ್ ಓಟ:

ಪ್ರಥಮ : ಮಧುರಾ, ಮಹಿಳಾ ಪೊಲೀಸ್ ಸಿಬ್ಬಂದಿ

ಪೊಲೀಸ್ ಮಹಿಳಾ ವಿಭಾಗದ 5k ಮ್ಯಾರಥಾನ್ ಓಟ:

ಪ್ರಥಮ : ಮಾಲತಿ, ಬಡಾವಣೆ ಪೊಲೀಸ್ ಠಾಣೆ, ದ್ವಿತೀಯ: ಶ್ವೇತಾ, ಹರಿಹರ ಪೊಲೀಸ್ ಠಾಣೆ.

ಸಾರ್ವಜನಿಕ ಪುರುಷ ವಿಭಾಗದ 10k ಮ್ಯಾರಥಾನ್ ಓಟ:

ಪ್ರಥಮ :ಪ್ರಭು ಲಮಾಣಿ, ದ್ವಿತೀಯ:ದೇವರಾಜ, ತೃತೀಯ: ಪ್ರವೀಣ್ ಎ ಕೆ ಕಾಡಜ್ಜಿ.

ಸಾರ್ವಜನಿಕ ಪುರುಷ ವಿಭಾಗದ 5k ಮ್ಯಾರಥಾನ್ ಓಟ:

ಪ್ರಥಮ :ನೀಲಪ್ಪ, ದ್ವಿತೀಯ: ಪ್ರಮೋದ್ ಭಜಂತ್ರಿ, ತೃತೀಯ: ರಮೇಶ್.

ಸಾರ್ವಜನಿಕ ಮಹಿಳಾ ವಿಭಾಗದ 10k ಮ್ಯಾರಥಾನ್ ಓಟ:

ಪ್ರಥಮ : ಅಕ್ಷತಾ ಎ, ದ್ವಿತೀಯ:ರೇಖಾ ಎಂ, ತೃತೀಯ: ಹರ್ಪಿತಾ ಕೆ.

ಸಾರ್ವಜನಿಕ ಮಹಿಳಾ ವಿಭಾಗದ 5k ಮ್ಯಾರಥಾನ್ ಓಟ:

ಪ್ರಥಮ : ಪದ್ಮಶ್ರೀ, ಬಡಾವಣೆ, ದ್ವಿತೀಯ: ಮಮತಾ., ತೃತೀಯ: ಖುಷಿ ಮತ್ತು ಶಿವಬಸವ್ವ ಕಲಕೋಟೆ.

ಕಾರ್ಯಾಕ್ರಮದಲ್ಲಿ ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ಜಿ ಮಂಜುನಾಥ್ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನೆ, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಸಿದ್ಧನಗೌಡ್ರು, ಡಿ ಎ ಆರ್, ಡಿಎಸ್ ಪಿ ನಿಷಿಮಪ್ಪ, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್ , ದಾವಣಗೆರೆ ವಿವಿಯ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಅಶೋಕ್ ಕುಮಾರ್ ಪಾಳೇದ, ಎನ್‌ಎಸ್‌ಎಸ್ ಅಧಿಕಾರಿ ಸಿದ್ದಪ್ಪ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಮಾಧ್ಯಮ ಮಿತ್ರರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment