SUDDIKSHANA KANNADA NEWS/ DAVANAGERE/ DATE:08-01-2025
ದಾವಣಗೆರೆ: ಹಳೇ ದಾವಣಗೆರೆ ನಗರದಲ್ಲಿ ಸಂಚಾರ ನಿರ್ವಹಣೆ ವ್ಯವಸ್ಥೆ, ಪಾರ್ಕಿಂಗ್, ಒನ್ ವೇ, ಫುಟ್ ಪಾತ್ ನಿರ್ವಹಣೆ, ಸಂಚಾರ ಫಲಕಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಪರಿಶೀಲನೆ ನಡೆಸಿದರು.
ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಪ್ರಮುಖ ರಸ್ತೆಗಳಾದ ಮಂಡಿಪೇಟೆ ರಸ್ತೆ, ಬಿನ್ನಿ ಕಂಪನಿ ರಸ್ತೆಗಳಲ್ಲಿ ಅಂಗಡಿ ಮಾಲೀಕರು ಪಾದಚಾರಿ ಮಾರ್ಗವನ್ನು ಅಕ್ರಮಿಸಿಕೊಂಡಿರುವ ಬಗ್ಗೆ ಕೆಲವು ಮಾಲೀಕರಿಗೆ ನೋಟೀಸ್ ನೀಡುವುದರ ಜೊತೆಗೆ ದಂಡವನ್ನು ವಿಧಿಸಲಾಯಿತು.
ಇನ್ನೂ ನಗರದ ಯಾವುದೇ ರಸ್ತೆಯಲ್ಲಿ ಈ ರೀತಿ ಪಾದಚಾರಿ ಮಾರ್ಗವನ್ನು ದುರ್ಬಳಕೆ ಮಾಡಿಕೊಂಡವರ ಮೇಲೆ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕರು ಸೂಚನೆಗಳನ್ನು ನೀಡಿದರು.
ಇದೇ ರೀತಿ ವಾಹನಗಳ ನಿಲುಗಡೆ ಸರಿಯಾಗಿ ಮಾಡದ ವಾಹನ ಚಾಲಕರ ಮೇಲೆ ಐಎಂವಿ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಿದರು. ಸ್ಥಳೀಯ ಅಂಗಡಿ ಮಾಲೀಕರ ಸಲಹೆಗಳು ಹಾಗೂ ಮೌಖಿಕ ಮನವಿಯನ್ನು ಪಡೆದು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕ್ರಮಗಳನ್ನು ಕೈಗೊಳ್ಳಲು ಹಾಗೂ ನಗರದಲ್ಲಿಸಂಚಾರ ಸುಧಾರಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಸೂಕ್ತ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳಾದ ಮಂಜಪ್ಪ, ಜಯಶೀಲ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.