SUDDIKSHANA KANNADA NEWS/ DAVANAGERE/ DATE:03-01-2025
ದಾವಣಗೆರೆ: ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಕ್ರೀಡೆಗಳ ಮೂಲಕ ಶಾಲಾ ಬಾಲಕಿಯರ ಸಬಲೀಕರಣಕ್ಕಾಗಿ ಖೇಲೋ ಇಂಡಿಯಾ ಅಡಿ ನಗರದ ಲೂಡ್ಸ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ರಾಜ್ಯಮಟ್ಟದ ಬಾಲಕಿಯರ ಪುಟ್ಬಾಲ್* ಪಂದ್ಯಾವಳಿಗೆ ಜನವರಿ 4ರಂದು ಚಾಲನೆ ಸಿಗಲಿದೆ.
13 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 200 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿರುತ್ತಾರೆ. ಕ್ರೀಡಾಪಟುಗಳ ವಸತಿ, ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗುವುದು.
ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ 50,000 ದ್ವಿತೀಯ 30,000 ನಗದು ಹಾಗೂ ಪಾರಿತೋಷಕವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಫುಟ್ಬಾಲ್ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಸಂಸದರಾದ ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ಸಾಬ್, ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರು, ಮಹಾನಗರ ಪಾಲಿಕೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಿ. ಪ್ರಿಯಾಂಕಾ, ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ಉಮೇಶ್,ಸವಿತಾ ಗಣೇಶ್ ಹುಲ್ಲುಮನಿ, ಸುಧಾ ಇಟ್ಟಿಗುಡಿ, ಉರುಬಾನ್ ಪಂಡಿತ್, ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಹಾಗೂ ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ ಅಯೂಬ್ ಪೈಲ್ವಾನ್,ಮಹಾನಗರ ಪಾಲಿಕೆ ಸದಸ್ಯರಾದ ಗಡಿಗುಡಾಳ್
ಮಂಜುನಾಥ್,ಎ.ಬಿ. ರಹೀಂ,ಎ. ನಾಗರಾಜ್, ಪುಟ್ಬಾಲ್ ತರಬೇತುದಾರ ಮುಸ್ತಫಾ, ಶ್ರೀನಿವಾಸ ದಾಸಕರಿಯಪ್ಪ, ಹಾಗೂ ಅಸೋಸಿಯೇಷನ್ ಪದಾಧಿಕಾರಿಗಳಾದ ಮೊಹಮ್ಮದ್ ರಫಿ, ಚಂದ್ರಶೇಖರ್, ಎಸ್.ಎಸ್. ಗಿರೀಶ್, ಅಲ್ಲಾವಲಿ ಮುಜಾಹಿದ್ ಖಾನ್, ಗೌಸ್ ಅಹಮ್ಮದ್ ಗುತ್ತಿ, ಹಿನಾಯತ್ ಅಲಿ ಖಾನ್, ಸೈಯದ್ ಖಾಲಿದ್ ಅಹಮದ್, ಅಹಮ್ಮದ್ ರಜಾ, ನೂರ್ ಅಹಮದ್, ಎ.ಸಿ. ಅಸ್ಲಂ, ಅಶ್ರಫ್ ಅಲಿ, ಖಾಜಿ ಖಲೀಲ್, ಶಿವಣ್ಣ ಟಿ.ಎಸ್.. ಮೊಹಮ್ಮದ್ ಸಮೀರ್, ತಾಹೀರ್ ಅಹಮ್ಮದ್, ನವೀದ್ ಅಹಮ್ಮದ್, ಪವನ್ ಹೆಚ್.ಆರ್., ಜಾನ್ ಫರ್ನಾಂಡೀಸ್, ಜುಲಿಕರ್ ಬುಟ್ಟೋ ಹಾಗೂ ಎಲ್ಲಾ ಮಹಾನಗರ ಪಾಲಿಕೆ ಸದಸ್ಯರು ಕ್ರೀಡಾಪೋತ್ಸಾಹಕರು ಆಗಮಿಸಲಿದ್ದಾರೆ.