SUDDIKSHANA KANNADA NEWS/ DAVANAGERE/ DATE-03-05-2025
ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ. ರಾಜತಾಂತ್ರಿಕ ದಾಳಿಯು ಒಂದೊಂದಾಗಿ ಆಗುತ್ತಲೇ ಇವೆ. ಪಾಪಿ ಪಾಕಿಸ್ತಾನವಂತೂ ನಡುಗಿ ಹೋಗಿದೆ. ಅಲ್ಲಿನ ನಾಯಕರಂತೂ ತಲೆ ಕೆಟ್ಟವರಂತೆ ಹೇಳಿಕೆ ಕೊಡುತ್ತಲೇ ಇದ್ದಾರೆ. 36 ಗಂಟೆಗಳಲ್ಲಿ ಭಾರತ ದಾಳಿ ಮಾಡುತ್ತದೆ ಎಂದಿದ್ದರು. ಆದ್ರೆ, ಏನೂ ಆಗಿಲ್ಲ. ಭಾರತ ಯಾವ ನಡೆ ಇಡುತ್ತದೆ ಎಂಬ ಆತಂಕ ಪಾಕ್ ಕಾಡುತ್ತಿದೆ.
ಪಹಲ್ಗಾಮ್ ನಲ್ಲಿ 26 ಮಂದಿ ಬಲಿ ಪಡೆದ ಬಳಿಕ ಭಾರತ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿದೆ. ಭಾರತ ಸರ್ಕಾರವು ಪಾಕಿಸ್ತಾನಿ ರಾಜಕಾರಣಿಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು ಮತ್ತು ಟಿವಿ ಚಾನೆಲ್ಗಳ ಹಲವಾರು ಸಾಮಾಜಿಕ ಖಾತೆಗಳನ್ನು ನಿರ್ಬಂಧಿಸಿದೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಇನ್ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಸರ್ಕಾರಿ ಆದೇಶದಿಂದಾಗಿ ಭಾರತದಲ್ಲಿ ಈ ವಿಷಯ ಲಭ್ಯವಿಲ್ಲ ಎಂದು ಅವರ
ಯೂಟ್ಯೂಬ್ ಚಾನೆಲ್ ಪ್ರಸ್ತುತ ಹೇಳುತ್ತದೆ.
ಫವಾದ್ ಖಾನ್ ನಿಂದ ಹನಿಯಾ ಆಮಿರ್ ವರೆಗೆ ಪಾಕಿಸ್ತಾನಿ ನಟರ ಇನ್ಸ್ಟಾಗ್ರಾಮ್ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಫವಾದ್ ಖಾನ್, ಹನಿಯಾ ಆಮಿರ್, ಸನಮ್ ಸಯೀದ್, ಅಲಿ ಜಾಫರ್, ಮಾವ್ರಾ ಹೊಕೇನ್, ಅದ್ನಾನ್ ಸಿದ್ದಿಕಿ ಮತ್ತು ಮಹಿರಾ ಖಾನ್ ಅವರ ಇನ್ಸ್ಟಾಗ್ರಾಮ್ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾದ ನಟರ ಪಟ್ಟಿಯಲ್ಲಿ ಸೇರಿದೆ. ಸಂದೇಶವು “ಭಾರತದಲ್ಲಿ ಖಾತೆ ಲಭ್ಯವಿಲ್ಲ. ಈ ವಿಷಯವನ್ನು ನಿರ್ಬಂಧಿಸಲು ನಾವು ಕಾನೂನು ವಿನಂತಿಯನ್ನು ಪಾಲಿಸಿದ್ದೇವೆ ಎಂದು ಹೇಳುತ್ತದೆ. ಈ ಮೂಲಕ ಪಾಕ್ ಭಾರತವು ಮರ್ಮಾಘಾತ ಕೊಡುತ್ತಲೇ ಇದೆ.