SUDDIKSHANA KANNADA NEWS/ DAVANAGERE/ DATE-10-05-2025
ದಾವಣಗೆರೆ ನಗರದ ತರಳಬಾಳು ಬಡಾವಣೆಯ 6ನೇ ಕ್ರಾಸ್ ನಿವಾಸಿಯಾದ ಡಾ. ನಾಗಪ್ಪ ಕೊಟ್ರಪ್ಪ ಕಡ್ಲಿ ಅವರ ಧರ್ಮಪತ್ನಿ ಶೈಲ ಎನ್ಕೆ ಕಡ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ.
ಅಂತಿಮ ದರ್ಶನಕ್ಕಾಗಿ ತರಳಬಾಳು ಬಡಾವಣೆಯ 1 ನೇಯ ಮುಖ್ಯರಸ್ತೆಯ 6ನೇ ಕ್ರಾಸ್ ನಲ್ಲಿರುವ ಅವರ ನಿವಾಸದಲ್ಲಿ ಅವರ ಪಾರ್ಥಿಮ ಶರೀರವನ್ನು ಸರ್ವರ ದರ್ಶನಕ್ಕೆ ಇಡಲಾಗಿತ್ತು.
ತೀವ್ರ ಕಂಬನಿ:
ತರಳಬಾಳು ಬಡಾವಣೆಯ ಅದೇ ರಸ್ತೆಯ. ನಿವಾಸಿಯಾದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ವಾಮದೇವಪ್ಪ ಲಿಂಗೈಕ್ಯ ಶೈಲಾ ಕಡ್ಲಿ ಅಮ್ಮ ಅವರ ನಿಧನ ಅತ್ಯಂತ ದುರದೃಷ್ಟಕರ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹದಾಯಕರಾಗಿದ್ದರು. ಅವರು ನಮ್ಮ ಬಡಾವಣೆಯ ಆದರ್ಶ ಗೃಹಿಣಿಯಾಗಿ ಸರ್ವರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅಗಲಿಕೆಯಿಂದ ತೀವ್ರ ದುಃಖ ತಪ್ತವಾಗಿರುವ ಅವರ ಪತಿ ಮತ್ತು ಕುಟುಂಬ ವರ್ಗ, ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗ, ಬಂಧು ಮಿತ್ರರು, ಅಪಾರ ಸ್ನೇಹ ಬಳಗ ದುಃಖ ಸಾಗರದಲ್ಲಿ ಮುಳುಗಿದೆ ಎಂದು ಬಿ .ವಾಮದೇವಪ್ಪ ತಿಳಿಸಿದ್ದಾರೆ.