SUDDIKSHANA KANNADA NEWS/ DAVANAGERE/ DATE:02-03-2025
ದಾವಣಗೆರೆ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವಿವಾಹ ಮಹೋತ್ಸವಕ್ಕೆ ಆಗಮಿಸದಿದ್ದರೆ ತಾಳಿಯನ್ನೇ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತನ ನಿವಾಸಕ್ಕೆ ಭೇಟಿ ನೀಡಿದ ಮನವೊಲಿಸಿದ್ದಾರೆ.
ಕಳೆದ ಗುರುವಾರ ಸಂಸದರ ಗೃಹಕಚೇರಿಗೆ ಆಗಮಿಸಿ ಮಾರ್ಚ್ 6 ರಂದು ನಡೆಯಲಿರುವ ತನ್ನ ವಿವಾಹ ಮಹೋತ್ಸವಕ್ಕೆ ಆಗಮಿಸುವಂತೆ ಯುವಕ ಸಂದೀಪ್ ಸಂಸದರಿಗೆ ವಿವಾಹದ ಆಹ್ವಾನ ಪತ್ರಿಕೆ ನೀಡಿದ್ದಾನೆ.
ಅಷ್ಟೇ ಅಲ್ಲದೇ ಸಂಸದರು ವಿವಾಹಕ್ಕೆ ಆಗಮಿಸದಿದ್ದರೆ ವಧುವಿಗೆ ತಾಳಿಯನ್ನೇ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಈ ಹಿನ್ನೆಲೆಯಲ್ಲಿ ಕಾರ್ಯನಿಮಿತ್ತ ಚನ್ನಗಿರಿಗೆ ತೆರಳಿದ್ದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕರ್ತ ಸಂದೀಪ್ ಅವರ ಚನ್ನಗಿರಿಯ ನಿವಾಸಕ್ಕೆ ಭೇಟಿ ನೀಡಿ ಮಾರ್ಚ್ 6 ರಂದು ದಾವಣಗೆರೆ ಕ್ಷೇತ್ರದಲ್ಲಿ ಲಭ್ಯವಿರದ ಕಾರಣ ಹೇಳಿ ಆತನ ಮನವೊಲಿಸಿ ವಿವಾಹಕ್ಕೆ ಶುಭಕೋರಿ ಉಡುಗೊರೆ ನೀಡಿದ್ದಾರೆ.
ಜೊತೆಗೆ ಆತನ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದಾರೆ. ಸಂಸದರ ಸರಳತೆಗೆ ಕುಟುಂಬದ ಸದಸ್ಯರು ಸಂತಸಪಟ್ಟಿದ್ದಾರೆ.