SUDDIKSHANA KANNADA NEWS/ DAVANAGERE/ DATE-08-05-2025
ನವದೆಹಲಿ: ಗಡಿಯಲ್ಲಿ ನುಸುಳಲು ಯತ್ನಿಸಿದ ಪಾಕ್ ಪ್ರಜೆಯನ್ನು ಪಂಜಾಬ್ ಗಡಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಎಚ್ಚರಿಕೆ ಹೊರತಾಗಿಯೂ ನುಸುಳಲು ಯತ್ನಿಸಿದ ಪಾಕ್ ಪ್ರಜೆ ಹತನಾಗಿದ್ದಾನೆ.
ಗಡಿ ಭದ್ರತಾ ಪಡೆಯು ಎಚ್ಚರಿಕೆ ನೀಡುತ್ತಲೇ ಇದದ್ರೂ ಗಡಿಯಲ್ಲಿ ದಾಟಿ ಬರಲು ಪಾಕ್ ಪ್ರಜೆ ಮುಂದಾದ. ಈ ವೇಳೆ ಗುಂಡಿಕ್ಕಿ ಹೊಡೆದು ಹಾಕಲಾಗಿದೆ. ಪಾಕ್ ನ ಕುತಂತ್ರಿಗಳು ಗಡಿಯಲ್ಲಿ ನುಸುಳಲು ಪ್ರಾರಂಭಿಸಿದ್ದು, ಭಾರತೀಯ ಯೋಧರು ತಕ್ಕ ಉತ್ತರ ಕೊಡುತ್ತಿದ್ದಾರೆ.