SUDDIKSHANA KANNADA NEWS/ DAVANAGERE/ DATE:21-02-2025
ದಾವಣಗೆರೆ: ಜಗಳೂರು ಮತ್ತು ಬಿದರಕೆರೆ ವಿ.ವಿ ಕೇಂದ್ರದಲ್ಲಿ 4ನೇ ತ್ರೈಮಾಸಿಕ ಕಾಮಗಾರಿ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ಬರುವ ಜಗಳೂರು ಪಟ್ಟಣ ಮತ್ತು ಎಲ್ಲಾ ಗ್ರಾಮಗಳ ಎನ್ಜೆವೈ ಮತ್ತು ಐ.ಪಿ ಮಾರ್ಗಗಳಿಗೆ ಫೆಬ್ರವರಿ 22 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವೈಯಕ್ತಿಕ ಕಡತಗಳ ಸಂರಕ್ಷಣೆ:
ನ್ಯಾಯಾಲಯದ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಜಿ ವಾಯುಸೇನಾ ಯೋಧರ ವೈಯಕ್ತಿಕ ಕಡತಗಳನ್ನು ಹೊರತುಪಡಿಸಿ, ಬಾಕಿ ಮಾಜಿ ವಾಯುಸೇನಾ ಯೋಧರ ವೈಯಕ್ತಿಕ ಕಡತಗಳನ್ನು 25 ವರ್ಷಗಳ ಬದಲಾಗಿ ಕೇವಲ 5 ವರ್ಷಗಳು ಮಾತ್ರ ಸಂರಕ್ಷಿಸಲಾಗುವುದು.
ತಮ್ಮ ವೈಯಕ್ತಿಕ ಕಡತಗಳ ಅವಶ್ಯಕತೆಯಿದ್ದರೆ ಜುಲೈ 10 ರೊಳಗಾಗಿ ವಾಯುಪಡೆ ದಾಖಲಾತಿ ಕಚೇರಿ ನವದೆಹಲಿ ದೂ.ಸಂ: 011-25687194, 5760, ಫ್ಯಾಕ್ಸ್ ಸಂ:011-25696552 ನ್ನು ಸಂಪರ್ಕಿಸಿ ದಾಖಲೆ ಪಡೆದುಕೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ.ಸಿ.ಎ ಹಿರೇಮಠ ತಿಳಿಸಿದ್ದಾರೆ.