SUDDIKSHANA KANNADA NEWS/ DAVANAGERE/ DATE-06-05-2025
ದಾವಣಗೆರೆ: ಮೀನುಗಾರಿಕೆ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಮಹತ್ವಕಾಂಕ್ಷೆಯ ಉದ್ದೇಶದಿಂದ ಕೇಂದ್ರ ಮತ್ಸ್ಯ ಸಂಪದ ಯೋಜನೆಯಡಿ ಮಂಜೂರಾದ ಪರಿಸರ ಸ್ನೇಹಿ ಮೀನು ಮಾರಾಟ ತ್ರಿಚಕ್ರ ವಾಹನಕ್ಕೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆಯ ಗೃಹಕಚೇರಿ ಆವರಣದಲ್ಲಿ ಚಾಲನೆ ನೀಡಿದರು. ಫಲಾನುಭವಿ ಮಹಿಳೆಗೆ ಕೀಲಿಕೈ ಹಸ್ತಾಂತರಿಸಿದರು.
ಈ ವಾಹನದಲ್ಲಿ ಆಧುನಿಕ ವಿನ್ಯಾಸವಿದ್ದು ಎಲ್ಲಾರೀತಿಯಲ್ಲೂ ಅನುಕೂಲಕರವಾಗಿದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ.
ಕರ್ನಾಟಕ ರಾಜ್ಯಕ್ಕೆ 150 ಮತ್ಸ್ಯ ವಾಹಿನಿ ವಾಹನ ನೀಡಲಾಗಿದ್ದು ಪ್ರತಿ ಜಿಲ್ಲೆಗೆ 5 ಫಲಾನುಭವಿಗಳಿಗೆ ಈ ವಾಹನ ಲಭ್ಯವಾಗಿದೆ.ದಾವಣಗೆರೆಯಲ್ಲಿಯೂ ಫಲಾನುಭವಿ ಮಹಿಳೆಗೆ ತ್ರಿಚಕ್ರ ವಾಹನ ನೀಡಲಾಗಿದೆ.