SUDDIKSHANA KANNADA NEWS/ DAVANAGERE/ DATE:14-01-2025
ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನ 9ನೇ ಮುಖ್ಯರಸ್ತೆಯ 3 ನೇ ತಿರುವಿನಲ್ಲಿ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಮಹಿಳೆಯರು ಮನೆ ಮುಂದೆ ರಂಗೋಲಿ ಬಿಡಿಸಿ ಖುಷಿ ಪಟ್ಟರು. ಗ್ರಾಮೀಣ ಪ್ರದೇಶದಲ್ಲಿ ಹಬ್ಬ ಆಚರಿಸುವಂತೆ ನಗರ ಪ್ರದೇಶದಲ್ಲಿಯೂ ಸಡಗರಿಂದ ಮಕರ ಸಂಕ್ರಾಂತಿ ಆಚರಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವೈಭವಯುತವಾಗಿ ಆಚರಣೆ ಮಾಡಲಾಗುತ್ತದೆ. ಇಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಹಳ್ಳಿ ಸೊಗಡು ಕಂಡು ಬರುವುದು ಕಡಿಮೆ. ಆದ್ರೆ, ಮಹಿಳೆಯರೆಲ್ಲರೂ ಸೇರಿಕೊಂಡು ಅರ್ಥಪೂರ್ಣವಾಗಿ ಪರಂಪರೆ ನೆನಪಿಸುವಂತೆ ಹಬ್ಬ ಆಚರಿಸಿದ್ದು ಖುಷಿ ಕೊಟ್ಟಿದೆ ಎಂದು ಹೇಳಿದರು.
ಮಹಿಳೆಯರು ಮನೆ ಮುಂದೆ ರಂಗೋಲಿ ಬಿಡಿಸಿ ಸಂಭ್ರಮಿಸುವ ಮೂಲಕ ಮಕರ ಸಂಕ್ರಮಣವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈ ರಸ್ತೆಯಲ್ಲಿನ ಮಹಿಳೆಯರೆಲ್ಲರೂ ಒಂದಾಗಿ ಸೇರಿ ಸಂಭ್ರಮದಿಂದ ಹಬ್ಬ ಆಚರಿಸುವ ಮೂಲಕ ಎಲ್ಲರಿಗೂ ಮಾದರಿ ಎನಿಸಿದರು. ಗ್ರಾಮೀಣ ಪ್ರದೇಶಕ್ಕೆ ಬಂದಂಥ ಅನುಭವ ಆಗುತ್ತಿತ್ತು. ಇಂದಿನ ಹೈಟೆಕ್ ಯುಗದಲ್ಲಿಯೂ ನಮ್ಮ ಸಂಸ್ಕೃತಿ, ಆಚರಣೆ, ಮಹತ್ವ ಸಾರುವುದನ್ನು ನೆನಪಿಸುವಂತೆ ಆಚರಣೆ ಮಾಡಿದ ಮಹಿಳೆಯರೆಲ್ಲರೂ ಅಭಿನಂದಾರ್ಹರು ಎಂದು ಹೇಳಿದರು.
ಮಕರ ಸಂಕ್ರಮಣ ಹಬ್ಬ ನಗರ ಪ್ರದೇಶದಲ್ಲಿಯೂ ವೈಭವಯುತವಾಗಿ, ಸಂಸ್ಕೃತಿ ನೆನಪಿಸುವಂತೆ ನಡೆದಿದ್ದು ವಿಶೇಷ. ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರೆಲ್ಲರೂ ಉತ್ಸಾಹಯುತರಾಗಿ ಪಾಲ್ಗೊಂಡು ಸಂಭ್ರಮಿಸಿದರು. ಹಬ್ಬಗಳೂ ಹೈಟೆಕ್ ಆಗಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಸೊಗಡು ನೆನಪಿಸಿದ್ದು ಎಲ್ಲರ ಮನಸ್ಸಿಗೆ ಸಂತಸ ತಂದಿತು ಎಂದು ಗಡಿಗುಡಾಳ್ ಮಂಜುನಾಥ್ ಹೇಳಿದರು.
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ವಿದ್ಯಾ, ಶ್ರುತಿ, ರಶ್ಮಿ, ಸುಗುಣ, ವೀಣಾ ಶಾರದಾ, ಪಲ್ಲವಿ, ವೀಣಾ, ಪದ್ಮ, ಶಾಲಿನಿ, ಕಲ್ಪನಾ, ನೇತ್ರಾ, ಸುಮಾ, ಜ್ಯೋತಿ, ನೀತು, ದೀಪಾ, ಪುನೀತ, ಸುಧಾ, ಲಕ್ಷ್ಮೀ, ಗಿರಿಜಮ್ಮ, ನಳಿನಾ, ಜಯಶ್ರೀ ಮತ್ತಿತರರು ಹಾಜರಿದ್ದರು.