SUDDIKSHANA KANNADA NEWS/ DAVANAGERE/ DATE:01-01-2025
ದಾವಣಗೆರೆ: ಪ್ರಸಕ್ತ ಸಾಲಿನ ವಿಕಲಚೇತನ ಫಲಾನುಭವಿಗಳು ರಿಯಾಯಿತಿ ದರದ ಬಸ್ಪಾಸ್ (ಹೊಸ, ನವೀಕರಣ) ಗಳನ್ನು ಪಡೆಯಲು ಸೇವಾ ಸಿಂಧು ಫೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸೇವಾ ಸಿಂಧು ಪೋರ್ಟಲ್ ನಲ್ಲಿ è http://serviceonline.gov.in/karnatka/ನಲ್ಲಿ ಘಟಕ ವ್ಯವಸ್ಥಾಪಕರ ಕೌಂಟರ್ (ಐಡಿ) ಗೆ ಅರ್ಜಿ ಸಲ್ಲಿಸಬಹುದು. ಮತ್ತು ಹೊಸ ಪಾಸ್ ಗಳನ್ನು ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ದಾವಣಗೆರೆ ವಿಭಾಗ ರವರ ಕೌಂಟರ್ (ಐಡಿ) ಗೆ ಅರ್ಜಿ ಸಲ್ಲಿಸಬೇಕು.
ಪಾಸ್ ನವೀಕರಣ ಮಾಡಿಸಿಕೊಳ್ಳುವ ವಿತರಣಾ ಕೇಂದ್ರ: ಜನವರಿ 1 ರಿಂದ ಫೆಬ್ರವರಿ 28 ರವರೆಗೆ ದಾವಣಗೆರೆ ಬಸ್ ನಿಲ್ದಾಣದಲ್ಲಿ ದಾವಣಗೆರೆ, ಜಗಳೂರು, ಚನ್ನಗಿರಿ ಫಲಾನುಭವಿಗಳು ನವೀಕರಣ ಮಾಡಿಸಿಕೊಳ್ಳಬಹುದು. ಜನವರಿ 1 ರಿಂದ ಫೆಬ್ರವರಿ 28 ರವರೆಗೆ ಹರಿಹರ ಬಸ್ ನಿಲ್ದಾಣದಲ್ಲಿ ಹರಿಹರ ಫಲಾನುಭವಿಗಳು ಪಾಸ್ ನವೀಕರಣ ಮಾಡಿಸಿಕೊಳ್ಳಬಹುದು.
ವಿಕಲಚೇತನ ಫಲಾನುಭವಿಗಳು ಆನ್ ಲೈನ್ ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು (ಯುಡಿಐಡಿ ಕಾರ್ಡ್, ಆಧಾರ್ ಕಾರ್ಡ್, ಅಂಗವಿಕಲರ ಗುರುತಿನ ಚೀಟಿ, ಪೋಟೋ) ಆಫ್ ಲೋಡ್ ಮಾಡುವುದು ಕಡ್ಡಾಯ. ಹಾಗೂ ಭೌತಿಕವಾಗಿ ಪಾಸ್ ಪಡೆಯಲು ಬಂದಾಗ ಮೂಲ ದಾಖಲೆಗಳು ಹಾಗೂ ಜೆರಾಕ್ಸ್ ಪ್ರತಿಯನ್ನು ಹಾಜರುಪಡಿಸಿ ವಿಕಲಚೇತನರ ಹೊಸ, ನವೀಕರಣ ಪಾಸ್ ಗಳನ್ನು ಪಡೆದುಕೊಳ್ಳಬೇಕೆಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.