• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Tuesday, May 13, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

EXCLUSIVE: ದರ್ಶನ್ ಗೆ ಜಾಮೀನು, ವಿಜಯಲಕ್ಷ್ಮೀಗೆ ಸಿಕ್ತು ಕೊಲ್ಲೂರು ಮೂಕಾಂಬಿಕೆ ದೇವಿ ಅನುಗ್ರಹ: ಮತ್ತೊಮ್ಮೆ ಸಾಬೀತಾಯ್ತು ತಾಯಿಯ ಮಹಾಶಕ್ತಿ..!

Editor by Editor
October 30, 2024
in ದಾವಣಗೆರೆ, UDUPI, ಬೆಂಗಳೂರು
0
EXCLUSIVE: ದರ್ಶನ್ ಗೆ ಜಾಮೀನು, ವಿಜಯಲಕ್ಷ್ಮೀಗೆ ಸಿಕ್ತು ಕೊಲ್ಲೂರು ಮೂಕಾಂಬಿಕೆ ದೇವಿ ಅನುಗ್ರಹ: ಮತ್ತೊಮ್ಮೆ ಸಾಬೀತಾಯ್ತು ತಾಯಿಯ ಮಹಾಶಕ್ತಿ..!

SUDDIKSHANA KANNADA NEWS/ DAVANAGERE/ DATE:30-10-2024

ದಾವಣಗೆರೆ/ ಕೊಲ್ಲೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಕೊಲ್ಲೂರು ಮೂಕಾಂಬಿಕೆ ತಾಯಿ ಕಷ್ಟ ಎಂದುಕೊಂಡು ಬಂದವರ ಸಮಸ್ಯೆ ಪರಿಹರಿಸಿದ ನಿದರ್ಶನ ಬಹಳಷ್ಟಿದೆ. ಯಾಕೆಂದರೆ ಮೂಕಾಂಬಿಕೆ ತಾಯಿ ಸನ್ನಿಧಿಯಲ್ಲಿ ಕಷ್ಟವೆಂದು ಬಂದವರೆಲ್ಲಾ ಪರಿಹಾರ ಕಂಡುಕೊಂಡಿದ್ದಾರೆ. ಖ್ಯಾತ ಗಾಯಕ ಕೆ. ಜೆ. ಯೇಸುದಾಸ್, ಸಂಗೀತ ಮಾಂತ್ರಿಕ ಇಳಯರಾಜ, ಮಲೆಯಾಳಂನ ಚಿತ್ರರಂಗ, ಎಂಜಿಆರ್, ಜಯಲಲಿತಾ ಸೇರಿದಂತೆ ಲೆಕ್ಕಕ್ಕೇ ಸಿಗದಷ್ಟು ಭಕ್ತರಿಗೆ ದೇವಿ ಅನುಗ್ರಹಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕೆ ತಾಯಿ ಸನ್ನಿಧಿಯಲ್ಲಿ ಚಂಡಿಕಾ ಯಾಗ ನಡೆಸಿ ಪೂಜೆ ಸಲ್ಲಿಸಿದರೆ ಅನುಗ್ರಹಿಸುತ್ತಾಳೆ ಎಂಬ ಪ್ರತೀತಿ ಶತಶತಮಾನಗಳಿಂದಲೂ ಇದೆ. ಈಗ ವಿಜಯಲಕ್ಷ್ಮೀ ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಾನಕ್ಕೆ ಜುಲೈ 25ರ ರಾತ್ರಿ ಬಂದಿದ್ದರು. ಅಲ್ಲಿಯೇ ವಾಸ್ತವ್ಯ ಹೂಡಿ ಜುಲೈ 26ಕ್ಕೆ ಚಂಡಿಕಾ ಯಾಗ ನಡೆಸಿ, ಆದಷ್ಟು ಬೇಗ ತನ್ನ ಪತಿ ದರ್ಶನ್ ತೂಗುದೀಪ ಅವರಿಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಸಿಗುವಂತೆ ಅನುಗ್ರಹಿಸು ತಾಯಿ ಎಂದು ಪ್ರಾರ್ಥಿಸಿದ್ದರು.

ವಿಜಯಲಕ್ಷ್ಮೀ ಪ್ರಾರ್ಥನೆಗೆ ಕೊಲ್ಲೂರು ಮೂಕಾಂಬಿಕಾ ತಾಯಿ ಅಸ್ತು ಎಂದಿದ್ದು, ಈಗ ದರ್ಶನ್ ತೂಗುದೀಪಗೆ ಜಾಮೀನು ಸಿಕ್ಕಿರುವುದೇ ಸಾಕ್ಷಿ. ಈ ಹಿಂದೆ ಮಾಜಿ ಸಿಎಂ ಜಯಲಲಿತಾ ಜೈಲಿನಲ್ಲಿದ್ದಾಗ ಚಂಡಿಕಯಾಗವನ್ನು ತಾಯಿ ಸನ್ನಿಧಿಯಲ್ಲಿ ನಡೆಸಲಾಗಿತ್ತು. ಆ ನಂತರ ಕೇಸ್ ನಿಂದ ಹೊರ ಬಂದಿದ್ದರು. ಈಗ ವಿಜಯಲಕ್ಷ್ಮೀಗೆ ಕೊಲ್ಲೂರು ಮೂಕಾಂಬಿಕಾ ದೇವಿಯ ಅನುಗ್ರಹ ಸಿಕ್ಕಿದ್ದು, ವಿಜಯಲಕ್ಷ್ಮೀ ಖುಷಿಯಾಗಿದ್ದಾರೆ.

ತಾಯಿ ಶಕ್ತಿ ಎಂಥದ್ದು…?

ಕೊಲ್ಲೂರಿನಲ್ಲಿ ನೆಲೆ ನಿಂತಿರುವ ಶ್ರೀ ಮೂಕಾಂಬಿಕಾ ತಾಯಿ ಸಂಕಷ್ಟಗಳನ್ನು ಪರಿಹರಿಸುವ ದೇವತೆ. ಕಷ್ಟ ಬಂದಾಗಲೆಲ್ಲಾ ದೊಡ್ಡವರು ಇಲ್ಲಿಗೆ ಬರುತ್ತಾರೆ. ತಾಯಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಅದರಲ್ಲಿಯೂ ಕಷ್ಟಾತಿಕಷ್ಟ ಬಂದಾಗ
ಮೂಕಾಂಬಿಕೆ ಸನ್ನಿಧಿಗೆ ಬಂದು ಚಂಡಿಕಾ ಯಾಗ ನಡೆಸುತ್ತಾರೆ. ಚಂಡಿಕಾ ಯಾಗ ಎಂದರೇನು..? ಈ ತಾಯಿ ಸನ್ನಿಧಿಯಲ್ಲಿ ನಡೆಸಿದರೆ ಏನೆಲ್ಲಾ ಒಳಿತಾಗುತ್ತೆ? ಯಾರೆಲ್ಲಾ ಒಳಿತು ಕಂಡಿದ್ದಾರೆ ಎಂಬುದು ಲೆಕ್ಕಕ್ಕೇ ಸಿಗದು.

ತಮಿಳುನಾಡಿನ ಎಂ. ಜಿ, ರಾಮಚಂದ್ರ, ಮಾಜಿ ಸಿಎಂ ದಿವಂಗತ ಜಯಲಲಿತಾ, ಸಂಗೀತ ಮಾಂತ್ರಿಕ ಇಳಯರಾಜ, ಖ್ಯಾತ ಹಿನ್ನೆಲೆ ಗಾಯಕ ಜೇಸುದಾಸ್, ಸೂಪರ್ ಸ್ಟಾರ್ ರಜಿನಿಕಾಂತ್, ಮಲೆಯಾಳಂ ಖ್ಯಾತ ನಟ ಮುಮ್ಮುಟ್ಟಿ, ಮಾಜಿ ಕ್ರಿಕೆಟಿಗ ಶ್ರೀಶಾಂತ್, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಮಲೆಯಾಳಂನ ಖ್ಯಾತ ನಟರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ದೇಶ ಮಾತ್ರವಲ್ಲ, ವಿದೇಶದಲ್ಲಿರುವವರು ಸಹ ಕೊಲ್ಲೂರು ತಾಯಿ ಬಳಿ ಬಂದಿದ್ದಾರೆ. ಸಂಕಷ್ಟ ಪರಿಹರಿಸಿಕೊಂಡಿದ್ದಾರೆ. ಅದರಲ್ಲಿಯೂ ಬಗೆಹರಿಯದ ಕಷ್ಟ, ನೋವು, ದುಃಖವನ್ನೂ ಪರಿಹರಿಸಿಕೊಂಡಿದ್ದಾರೆ. ಪರಿಹರಿಸಿಕೊಳ್ಳುತ್ತಲೂ ಇದ್ದಾರೆ.

ಕುಂದಾಪುರ ತಾಲೂಕಿನ ಬೈಂದೂರು ವ್ಯಾಪ್ತಿಗೆ ಬರುವ ಕೊಲ್ಲೂರಿನಲ್ಲಿ ನೆಲೆ ನಿಂತಿರುವ ಮೂಕಾಂಬಿಕಾ ತಾಯಿ ದೇಗುಲ ಅತ್ಯಂತ ಪವಿತ್ರ ಶ್ರದ್ಧಾ ಭಕ್ತಿಯ ತಾಣ. ಕೋಟ್ಯಂತರ ಭಕ್ತರನ್ನು ಹೊಂದಿರುವ ದೇವಿಯ ಸನ್ನಿಧಾನದಲ್ಲಿ ನಡೆಯುವ ಪೂಜೆಗಳಿಗೆ ತುಂಬಾನೇ ಮಹತ್ವ ಇದೆ. ಅದರಲ್ಲಿಯೂ ಚಂಡಿಕಾ ಹೋಮಕ್ಕೆ ವಿಶೇಷ ಸ್ಥಾನ. ಅಂದ ಹಾಗೆ, ಕೊಲ್ಲೂರಿನಲ್ಲಿ ಚಂಡಿಕಾಯಾಗ ನಡೆಸಬೇಕೆಂದರೆ ಸಾಮಾನ್ಯ ಜನರು ವರ್ಷಗಟ್ಟಲೇ ಕಾಯಲೇ ಬೇಕು.

ಚಂಡಿಕಾ ಯಾಗ ಮಹತ್ವವೇನು…?

ಕೊಲ್ಲೂರಿನಲ್ಲಿ ನಡೆಯುವ ಅತ್ಯಂತ ಪವಿತ್ರ ಮತ್ತು ಮಹತ್ವದ್ದು ಚಂಡಿಕಾ ಯಾಗ ಅಥವಾ ಚಂಡಿಕಾ ಹೋಮ. ದೇವಿಗೆ ಅತ್ಯಂತ ಪ್ರಿಯ ಮತ್ತು ಬಾಕಿ ಎಲ್ಲಾ ಹೋಮಗಳಿಗಿಂತ ವೈಶಿಷ್ಟವಾಗಿ ನಡೆಯುವಂಥ ಶಕ್ತಿಯುತ ಯಾಗ. ಕೊಲ್ಲೂರಿನ
ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿನಿತ್ಯ ನಡೆಯುವ ಪೂಜೆಗಳು ಒಂದಕ್ಕಿಂತ ಮತ್ತೊಂದು ಮಹತ್ವದ್ದು. ಸಹಸ್ರನಾಮ ಕುಂಕುಮಾರ್ಚನೆ, ತ್ರಿಶತಿ ಕುಂಕುಮಾರ್ಚನೆ, ಅಷ್ಟೋತ್ತರ ಕುಂಕುಮಾರ್ಚನೆ, ತ್ರಿಶತಿ ಭಸ್ಮಾರ್ಚನೆ, ಪಂಚಾಮೃತ, ಕ್ಷೀರಾಭಿಷೇಕ, ಪಂಚಾಮೃತ ಹೀಗೆ ಈ ದೇವಿ ನೆಲೆಸಿರುವ ನಡೆಯುವ ಪೂಜೆಗಳು ಒಂದಕ್ಕಿಂತ ಮತ್ತೊಂದು ಶ್ರೇಷ್ಠ.

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಬಂದು ಹೋಗುವ ಭಕ್ತರ ಸಂಖ್ಯೆ ಲೆಕ್ಕಕ್ಕೇ ಇಲ್ಲ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ಮೂಲೆಗಳಿಂದ ಕೋಟ್ಯಂತರ ಭಕ್ತರು ಬಂದು ದೇವಿಯ ಸನ್ನಿಧಿಯಲ್ಲಿ ಇಷ್ಟಾರ್ಥ
ಸಿದ್ಧಿಗಾಗಿ ಚಂಡಿಕಾಯಾಗ ನಡೆಸುತ್ತಾರೆ.

ಶ್ಲೋಕಗಳು, ಮಂತ್ರಗಳ ಪಠಣ ಹೇಗೆ…?

ಶ್ರೀದೇವಿ ಮಹಾತ್ಮೆಯ 700 ಶ್ಲೋಕಗಳನ್ನು ಓದಿ ಮತ್ತು 700 ಮಂತ್ರಗಳನ್ನು ಹೇಳುತ್ತಾ, 700 ಬಾರಿ ಪಾಯಸವನ್ನು ಅಗ್ನಿಗೆ ಹಾಕಲಾಗುತ್ತದೆ. ಈ ಸೇವೆಯು ಸುಮಾರು 2 ಗಂಟೆಯದ್ದಾಗಿದ್ದು, ಆರರಿಂದ ಏಳು ಪುರೋಹಿತರು ಇದನ್ನು ನಡೆಸಿಕೊಡುತ್ತಾರೆ. ಪ್ರತಿದಿನವೂ ಇಲ್ಲಿ ಚಂಡಿಕಾ ಹೋಮದ ಸೇವೆಯನ್ನು ನೆರವೇರಿಸುತ್ತಾರೆ. ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಜನಸಾಮಾನ್ಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಈ ಹೋಮ ನಡೆಸುವುದು ಸಾಮಾನ್ಯ.

ದಿನಕ್ಕೆ ಎಷ್ಟು ಚಂಡಿಕಾ ಯಾಗ ನಡೆಯುತ್ತೆ…?

ದಿನಕ್ಕೆ ಹೆಚ್ಚು ಅಂದರೆ 12 ಚಂಡಿಕಾಯಾಗ ಮಾತ್ರ ದೇವಿ ಸನ್ನಿಧಾನದಲ್ಲಿ ನಡೆಯುತ್ತದೆ. ಇದರಲ್ಲಿ ಕೇವಲ 8 ಸಾಮಾನ್ಯ, ವಿಐಪಿ ಮೂರರಿಂದ ನಾಲ್ಕು ನೆರವೇರುತ್ತದೆ. ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಚಂಡಿಕಾ ಹೋಮಕ್ಕೆ ಭಾರೀ ಬೇಡಿಕೆ ಇರುವುದಂತೂ ಸತ್ಯ.

ವಿಜಯಲಕ್ಷ್ಮೀಗೆ ಸಿಗ್ತು ಕೃಪಕಟಾಕ್ಷ

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಶುಕ್ರವಾರ ಚಂಡಿಕಾ ಯಾಗ ನಡೆಸಿದ್ದಾರೆ. ಶುಕ್ರವಾರ ಚಂಡಿಕಾ ಯಾಗ ನಡೆಸಿದರೆ ಶ್ರೇಷ್ಠ ಎಂಬ ಮಾತಿದೆ. ತಾಯಿಗೆ ಹೆಚ್ಚು ಭಕ್ತರು ನಡೆದುಕೊಳ್ಳುವ ದಿನವೂ ಹೌದು. ಮಂಗಳವಾರ, ಶುಕ್ರವಾರ ಶ್ರೇಷ್ಠ ದಿನ ಎಂಬ ನಂಬಿಕೆ ಇದೆ. ದರ್ಶನ್ ತೂಗುದೀಪ ಅವರ ಪತ್ನಿ ಪತಿ ಬಿಡುಗಡೆಯಾಗಬೇಕು, ಸಂಕಷ್ಟ ಪರಿಹಾರವಾಗಬೇಕು ಎಂಬ ಸಂಕಲ್ಪ ತೊಟ್ಟು ಚಂಡಿಕಾ ಯಾಗ ನೆರವೇರಿಸಿದ್ದಾರೆ. ಮೂಕಾಂಬಿಕಾ ತಾಯಿಯ ಬಳಿ ಬಂದು ಕಷ್ಟ ಪರಿಹರಿಸಿಕೊಂಡವರು ಲೆಕ್ಕಕ್ಕೇ ಸಿಗದು.

ಕೊಲ್ಲೂರು ಮೂಕಾಂಬಿಕಾ ತಾಯಿ ಸನ್ನಿಧಿಗೆ ಬರುವ ಭಕ್ತರೆಲ್ಲರೂ ಕಷ್ಟ ಪರಿಹರಿಸಿಕೊಂಡು ಹೋಗಿದ್ದಾರೆ. ಜೀವನವೇ ಬೇಡ, ಬ್ಯುಸಿನೆಸ್ ಬೇಡ, ತಾವು ಸಾಧಿಸಿರುವ ಸಾಧನೆಯ ಕ್ಷೇತ್ರ ಬಿಡಬೇಕೆಂದುಕೊಂಡವರು ಮತ್ತೆ ಧೂಳಿನಿಂದ ಮತ್ತೆ ಎದ್ದು ಬಂದ ಚರಿತ್ರೆಯೂ ಇದೆ. ಮೂಕಾಂಬಿಕಾ ತಾಯಿಯು ಸಂಕಷ್ಟ ಪರಿಹರಿಸಿದ್ದರಿಂದಲೇ ಇಲ್ಲಿಗೆ ಬರುವವರ ಸಂಖ್ಯೆ ಜಾಸ್ತಿ ಇದೆ. ತಮಿಳುನಾಡಿನ ಖ್ಯಾತ ನಟ ಎಂಜಿಆರ್ ಅವರು ಇಲ್ಲಿಗೆ ಬಂದು ಹೋದ ಮೇಲೆಯೇ ಮುಖ್ಯಮಂತ್ರಿಯಾಗಿದ್ದು, ಅಕ್ರಮ ಆಸ್ತಿ ಗಳಿಕೆ ಕೇಸ್ ನಲ್ಲಿ ಜಯಲಲಿತಾ ಅವರು ಬಂಧನಕ್ಕೊಳಗಾಗಿದ್ದಾಗ ಇಲ್ಲಿಗೆ ಬಂದು ಜಯಲಲಿತಾ ಪಕ್ಷದವರು ಚಂಡಿಕಾ ಯಾಗ ನೆರವೇರಿಸಿದ್ದರು. ಬಸ್ ನಲ್ಲಿ ಬಂದು ಪೂಜೆ ಸಲ್ಲಿಸಿದ್ದರು, ಚಂಡಿಕಾ ಯಾಗ ನಡೆಸಿದ್ದರು. ಕಾಕತಾಳೀಯ ಎಂಬಂತೆ ಜಯಲಲಿತಾ ಅವರು ಬಿಡುಗಡೆ ಆಗಿದ್ದರು.

ಇದೆಲ್ಲಾ ವಿಚಾರ ಅರಿತ ವಿಜಯಲಕ್ಷ್ಮೀ ಅವರು ಕೊಲ್ಲೂರಿಗೆ ಬಂದು ಶ್ರದ್ಧಾ ಭಕ್ತಿಯಿಂದ ತಾಯಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತು, ಚಂಡಿಕಾ ಯಾಗ ನೆರವೇರಿಸಿದ್ದರು, ದೇವಸ್ಥಾನದ ಅಡಿಗರು ಪೂಜೆ ನೆರವೇರಿಸಿಕೊಟ್ಟಿದ್ದರು. ನಟ ದರ್ಶನ್
ಈಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿದ್ದು, ಇಂದು ಸಂಜೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ.ಮೂಕಾಂಬಿಕಾ ತಾಯಿ ಆಶೀರ್ವದಿಸಿದ್ದು, ಚಾಲೆಂಜಿಂಗ್ ಸ್ಟಾರ್ ಜೈಲಿನಿಂದ ಹೊರ ಬರುವುದಕ್ಕೆ ಕ್ಷಣಕ್ಷಣನೆ ಶುರುವಾಗಿದೆ. ವಿಜಯಲಕ್ಷ್ಮೀ ಅವರ ಇಷ್ಟಾರ್ಥ ಸಿದ್ಧಿಸಿದ್ದು, ತಾಯಿ ಸನ್ನಿಧಿಯಲ್ಲಿ ಹೊತ್ತಿದ್ದ ಹರಕೆ ತೀರಿಸಬೇಕು. ಇಲ್ಲದಿದ್ದರೆ ಕೊಲ್ಲೂರು ಮೂಕಾಂಬಿಕಾ ತಾಯಿ ಸಿಟ್ಟಿಗೆ ಒಳಗಾಗಬೇಕಾಗುತ್ತದೆ.

Next Post
ದೀಪಾವಳಿ ಹಬ್ಬದ ಆಚರಣೆಯ ವಿಶೇಷ ಪೂಜಾ ಮಾಹಿತಿ, ದೀಪಾವಳಿ ಲಕ್ಷ್ಮಿ ಪೂಜಾ ಮುಹೂರ್ತ

ದೀಪಾವಳಿ ಹಬ್ಬದ ಆಚರಣೆಯ ವಿಶೇಷ ಪೂಜಾ ಮಾಹಿತಿ, ದೀಪಾವಳಿ ಲಕ್ಷ್ಮಿ ಪೂಜಾ ಮುಹೂರ್ತ

Leave a Reply Cancel reply

Your email address will not be published. Required fields are marked *

Recent Posts

  • ತಮಿಳುನಾಡಿನ 2019ರ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಕೇಸ್: 9 ಆರೋಪಿಗಳು ದೋಷಿಗಳು!
  • ಬಯೋಮೆಡಿಕಲ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಸ್ನೇಹಿತ ಸೇರಿ ಇಬ್ಬರ ಬಂಧನ!
  • ನಕಲಿ ಮದ್ಯ ಸೇವಿಸಿ 14 ಮಂದಿ ಸಾವು, 6 ಮಂದಿ ಸ್ಥಿತಿ ಗಂಭೀರ!
  • ಪಾಕಿಸ್ತಾನಕ್ಕೆ ಲಾಸ್ಟ್ ವಾರ್ನಿಂಗ್: ಪ್ರಧಾನಿ ಮೋದಿ ಖಡಕ್ ಸಂದೇಶಕ್ಕೆ ಬೆಚ್ಚಿಬಿದ್ದ ಶತ್ರುರಾಷ್ಟ್ರ!
  • ಲಷ್ಕರ್ ಭಯೋತ್ಪಾದಕ ಫಿನಿಶ್: ಸೆರೆ ಸಿಕ್ಕ ಇಬ್ಬರ ವಿಚಾರಣೆ!

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In