SUDDIKSHANA KANNADA NEWS/ DAVANAGERE/ DATE:13-01-2025
ದಾವಣಗೆರೆ: ಹಿಂದೂಗಳು ಕಾಮಧೇನು ಎಂದು ಪೂಜಿಸುವ ಹಸುವಿನ ಕೆಚ್ಚಲನ್ನು ಕೊಯ್ದು ಪೈಶಾಚಿಕ ಕೃತವೆಸಗಿರುವವರನ್ನು ಕೂಡಲೇ ಬಂಧಿಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಚಾಮರಾಜ ಪೇಟೆಯ ವಿನಾಯಕ ನಗರದಲ್ಲಿ, ಪುಣ್ಯಕೋಟಿ ಎಂದು ಕರೆಯುವ, ಹಿಂದೂಗಳು ಕಾಮಧೇನು ಎಂದು ಆರಾಧಿಸುವ ಹಸುಗಳ ಕೆಚ್ಚಲನ್ನು ಕೊಯ್ದು, ವಿಕೃತಿ ಮೆರೆದಂತಹ ದುಷ್ಕರ್ಮಿಗಳನ್ನು, ದೇಶ ದ್ರೋಹಿಗಳನ್ನು ಈ ಕೂಡಲೇ
ಬಂಧಿಸಿ, ಕಾನೂನಿನ ಚೌಕಟ್ಟಿನಲ್ಲಿ ನೀಡುವಂತಹ ಎಲ್ಲಾ ಶಿಕ್ಷೆಗಳನ್ನು ಇವರಿಗೆ ನೀಡಿ, ಹಿಂದೂಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮಹಾಸಭಾದ ಕಾರ್ಯಕರ್ತರು ಒತ್ತಾಯಿಸಿದರು.
ಸರ್ಕಾರವು ಕೂಡಲೇ ಕ್ರಮಕೈಗೊಳ್ಳದೇ ಹೋದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾವು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಜೆ. ಅರುಣ್ ಕುಮಾರ್, ಉಪಾಧ್ಯಕ್ಷರಾದ ಕೆ.ಜಿ. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಸ್. ಅರುಣಕುಮಾರ್, ಸಂಘಟನ ಕಾರ್ಯದರ್ಶಿ ಯು. ಸತೀಶ ಮತ್ತಿತರರಿದ್ದರು.