SUDDIKSHANA KANNADA NEWS/ DAVANAGERE/ DATE:13-01-2025
ದಾವಣಗೆರೆ: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವತಿಯಿಂದ ಎಸ್ಸಿಎಸ್ಪಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ದಾವಣಗೆರೆ ದಕ್ಷಿಣ ವಲಯದ ಸರ್ಕಾರಿ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿಯ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಜನವರಿ 15 ರಂದು ಬೆಳಿಗ್ಗೆ 6 ಗಂಟೆಗೆ ರಾಜ್ಯ ಶೈಕ್ಷಣಿಕ ಪ್ರವಾಸ ಕರ್ನಾಟಕ ದರ್ಶನ ಕಾರ್ಯಕ್ರಮದಡಿಯಲ್ಲಿ ಶೈಕ್ಷಣಿಕ ಪ್ರವಾಸ ಆಯೋಜಿಸಲಾಗಿದೆ.
89 ವಿದ್ಯಾರ್ಥಿಗಳಿಗೆ ಜೋಗ ಪಾಲ್ಸ್, ಶ್ರೀರಂಗಪಟ್ಟಣ,ಮೈಸೂರು, ಮುರುಡೇಶ್ವರ, ಉಡುಪಿ, ಕಟೀಲು ಮಂಗಳೂರು, ಭಾಗಮಂಡಲ, ಮಡೀಕೇರಿ, ಈ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲಾಗುವುದೆಂದು ಕ್ಷೇತ್ರ ಸಮನ್ವಯಾಧಿಕಾರಿ ಚೌಡಪ್ಪ.ಬಿ.ಎಂ ತಿಳಿಸಿದ್ದಾರೆ.