SUDDIKSHANA KANNADA NEWS/ DAVANAGERE/ DATE:11-03-2025
ದಾವಣಗೆರೆ: ದಾವಣಗೆರೆ ಲೋಕಸಭಾ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ನಿನ್ನೆ ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ದುಂದು ವೆಚ್ಚ ಮಾಡಬೇಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದರು
ತಮ್ಮ ಹುಟ್ಟುಹಬ್ಬಕ್ಕೆ ದುಂದು ವೆಚ್ಚ ಬೇಡ ಎಂದ 24 ಗಂಟೆಯಲ್ಲಿಯೇ ವಿನೂತನ ಪ್ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ತೀರ್ಮಾನಿಸಿದ್ದಾರೆ.
ಪ್ರಭಾ ಮಲ್ಲಿಕಾರ್ಜುನ್ ಅವರು ಈ ರೀತಿ ಕರೆ ನೀಡಿದ 24 ಗಂಟೆಯಲ್ಲಿಯೇ, ಅವರ ಹುಟ್ಟುಹಬ್ಬವನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷವಾಗಿ ಆಚರಿಸಬೇಕು ಎಂದು ತೀರ್ಮಾನಿಸಿದ ಹರಿಹರ ತಾಲೂಕಿನ ಮುಖಂಡರಾದ
ಬೆಳ್ಳೂಡಿ ಬಸವರಾಜ್ ಹಾಗೂ ಹಾಲೇಶ್ ಗೌಡ್ರು ದೇವರ ಬೆಳಕೇರಿಯ ಸಿದ್ದವೀರಪ್ಪ ನಾಲೆಯ ಬಲದಂಡೆಯ ಚಾನೆಲ್ ಹೂಳು ತೆಗೆಯುವ ಮೂಲಕ ಸಂಸದರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲು ತೀರ್ಮಾನಿಸಿದ್ದಾರೆ.
ದೇವರ ಬೆಳಕೆರೆ, ಕಡ್ಲೆಗುಂದಿ, ಸಲಗನಹಳ್ಳಿ, ಬನ್ನಿಕೊಡು, ಶಿವನಹಳ್ಳಿ, ಬೆಳ್ಳೂಡಿ, ಹನಗವಾಡಿ ಮಾರ್ಗವಾಗಿ ಹರಿಹರ ತಲುಪುವ ಈ ನಾಲೆಯ ಹೂಳು ತೆಗೆಯುವ ಕಾರ್ಯ ಇದೆ 13ನೇ ತಾರೀಕು ಗುರುವಾರದಿಂದ ಪ್ರಾರಂಭವಾಗಲಿದೆ ಎಂದು
ತಿಳಿಸಲಾಗಿದೆ.