SUDDIKSHANA KANNADA NEWS/ DAVANAGERE/ DATE:14-01-2025
ಲಖ್ನೋ: ರಜೆ ಇದ್ದ ಹಿನ್ನೆಲೆಯಲ್ಲಿ ಥಾಯ್ಲೆಂಡ್ ಗೆ ದಂಪತಿ ಹೋಗಿದ್ದು, ಈ ವೇಳೆ ಉತ್ತರ ಪ್ರದೇಶದ ಸುಂದರಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪತಿಯೇ ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಅನುಮಾನಾಸ್ಪದವಾಗಿ ಹತ್ಯೆಗಾದವಳನ್ನು ಪ್ರಿಯಾಂಕಾ ಶರ್ಮಾ ಎಂದು ಗುರುತಿಸಲಾಗಿದೆ. ಆಕೆಯ ಪತಿ ಆಶಿಶ್ ಶ್ರೀವಾಸ್ತವ ಕೊಂದಿದ್ದಾನೆ ಎಂದು ಆಕೆಯ ತಂದೆ ಆರೋಪಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಲಕ್ನೋ ಮೂಲದ ಮಹಿಳೆಯೊಬ್ಬರು ಪತಿ ಮತ್ತು ಮಗನೊಂದಿಗೆ ವಿಹಾರಕ್ಕೆಂದು ಥಾಯ್ಲೆಂಡ್ನ ಪಟ್ಟಾಯದಲ್ಲಿರುವ ಹೋಟೆಲ್ನಲ್ಲಿ ತಂಗಿದ್ದರು. ಇಲ್ಲಿ ನಿಗೂಢ ರೀತಿಯಲ್ಲಿ ಪ್ರಿಯಾಂಕಾ ಶರ್ಮಾ ಶವವಾಗಿ ಪತ್ತೆಯಾಗಿದ್ದಾರೆ.
ಮಹಿಳೆ ಪ್ರಿಯಾಂಕಾ ಶರ್ಮಾಳನ್ನು ಆಕೆಯ ಪತಿ ಆಶಿಶ್ ಶ್ರೀವಾಸ್ತವ ಕೊಂದಿದ್ದಾನೆ ಎಂದು ಆಕೆಯ ತಂದೆ ಆರೋಪಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಆಶಿಶ್ ಉತ್ತರ ಪ್ರದೇಶದ ಒರೈ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ವಿವಾಹವಾದಾಗಿನಿಂದ ಆಶಿಶ್ ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ಪ್ರಿಯಾಂಕಾ ತಂದೆ ಸತ್ಯನಾರಾಯಣ ಶರ್ಮಾ ಆರೋಪಿಸಿದ್ದಾರೆ.
ಆಶೀಶ್ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಸತ್ಯನಾರಾಯಣ್ ಹೇಳಿದ್ದು, ಮದುವೆಯಾದಾಗಿನಿಂದಲೂ ಪ್ರಿಯಾಂಕಾಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಹಿಂದೆಯೂ ಪ್ರಿಯಾಂಕಾ ಆಶಿಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣ ದಾಖಲಿಸಿದ್ದರು ಎಂದು ಅವರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಿಯಾಂಕಾ ಅವರ ತಂದೆಯವರು ರಾಜ್ಯಸಭಾ ಸದಸ್ಯ ದಿನೇಶ್ ಶರ್ಮಾ ಅವರಿಂದಲೂ ತನಿಖೆಗೆ ಸಹಾಯ ಕೋರಿದ್ದಾರೆ.