SUDDIKSHANA KANNADA NEWS/ DAVANAGERE/ DATE:18-01-2025
ದಾವಣಗೆರೆ: ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಂಕರಪ್ಪ ಅವರನ್ನು ಬೆಂಗಳೂರಿನ ನಿವಾಸದಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭೇಟಿ ಮಾಡಿ ಕುಶಲೋಪರಿ ನಡೆಸಿದರು.
ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕೋಡಪಾನ್ ದಾದಾಪೀರ್ ಪಿಂಜಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಹೆಚ್., ನದಾಫ್ ಸಂಘದ ಜಿಲ್ಲಾಧ್ಯಕ್ಷ ಬಡೇ ಸಾಬ್, 9 ನೇ ವಾರ್ಡ್ ಅಧ್ಯಕ್ಷ ಪಿ. ಮೊಟ್ಟೆ ದಾದಾಪೀರ್, ಬಾಪೂಜಿ ಅಂಜನಪ್ಪ, ನಿಟ್ಟುವಳ್ಳಿ ಪ್ರವೀಣ್, ಪಾಲಿಕೆ ನಾಮ ನಿರ್ದೇಶನ ಸದಸ್ಯೆ ಸಾಹಿದ ಬಾನು, ಆಶ್ರಯ ಸಮಿತಿ ಸದಸ್ಯೆ ರಹಜಾನ್ ದಾದಾಪೀರ್, ಅಹಮದ್ ಖಾನ್, ಎಂ. ಆರ್. ಸಿದ್ದೀಕ್, ಶ್ರೀನಿವಾಸ ಕೆ.ಆರ್. ಮುಂತಾದವರು ಉಪಸ್ಥಿತರಿದ್ದರು.