ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶಾಂತಿ ಸಾಕು… ಕ್ರಮ ಆಗ್ಲೇಬೇಕು: ಉಗ್ರರ ದಾಳಿಗೆ ಬಾಲಿವುಡ್, ಸ್ಯಾಂಡಲ್ ವುಡ್ ನಟರು ನಿಗಿನಿಗಿ…!

On: April 24, 2025 11:07 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-24-04-2025

ಜಮ್ಮುಕಾಶ್ಮೀರದ ಪಹಲ್ಲಾಮ್ ನಲ್ಲಿ 26 ಮಂದಿಯನ್ನು ಕೊಂದು ಹಾಕಿದ ಉಗ್ರರ ಕೃತ್ಯಕ್ಕೆ ಬಾಲಿವುಡ್, ಮಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಸಿನಿಮಾ ನಟರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತುಕತೆ ಬೇಡವೇ ಬೇಡ, ಏನಿದ್ದರೂ ಪ್ರತೀಕಾರವೇ ಆಗಬೇಕು ಎಂದು ಗುಡುಗಿದ್ದಾರೆ.

ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಸೇರಿದಂತೆ ಖ್ಯಾತ ನಟರು ಸೆಲೆಬ್ರಿಟಿಗಳು ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾತುಕತೆ ಸಾಕು ಇನ್ನೇನಿದ್ದರೂ ಕ್ರಮ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಬಾಲಿವುಡ್ ನಟಿ ದಿಶಾ ಪಠಾನಿ ಅವರ ಸಹೋದರಿ ಮಾಜಿ ಮೇಜರ್ ಆಗಿ ಸೇವೆ ಸಲ್ಲಿಸಿದ್ದು ಖುಷ್ಬೋ ಪಠಾನಿ ಅವರೂ ಪ್ರತಿಕ್ರಿಯಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಏನಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ. ಈಗ ಅದೆಲ್ಲವೂ ಸುದ್ದಿಯಲ್ಲಿದೆ. ಇದನ್ನೇ ಕಲಿಯುಗ ಎಂದು ಕರೆಯುತ್ತಾರೆ. ಇದು ಕಲಿಯುಗನಾ? ಯುದ್ಧವು ಕೊನೆಯ ಆಯ್ಕೆಯಾಗಿರಬೇಕು ಎಂದು ಹೇಳಲಾಗುತ್ತದೆ. ಅಂದರೆ ಯುದ್ಧ ನಡೆಯಬೇಕಾದದ್ದು ಎಲ್ಲಾ ಎಂದಿದ್ದಾರೆ.

ನಾವು 75 ವರ್ಷಗಳಿಂದ ಈ ಪಾಕಿಸ್ತಾನಿಗಳನ್ನು ಸಹಿಸಿಕೊಳ್ಳುತ್ತಿದ್ದೇವೆ ಮತ್ತು ಪಾಕಿಸ್ತಾನವು ಪ್ರೀತಿ ಮತ್ತು ಶಾಂತಿಯ ಬಗ್ಗೆ ಬಹಳಷ್ಟು ನಾಟಕಗಳನ್ನು ಮಾಡಿದೆ. ನಾವು ಸಾಮಾನ್ಯವಾಗಿ ನಮಗೆ ನಾವೇ ಸುಳ್ಳು ಹೇಳಿಕೊಳ್ಳುತ್ತಲೇ ಇರುತ್ತೇವೆ. ವಿಷಯಗಳನ್ನು ಗಣನೆಗೆ ತೆಗೆದುಕೊಂಡರೆ, ಇದು ಧಾರ್ಮಿಕ ವಿಷಯ, ಪಹಲ್ಗಾಮ್‌ನಲ್ಲಿ ಅವರು ಹಿಂದೂಗಳನ್ನು ಕೊಂದ ರೀತಿ ಧಾರ್ಮಿಕ ವಿಷಯ ಎಂದಿದ್ದಾರೆ.ಭಯೋತ್ಪಾದಕ ಎನ್ನೋ ಬದಲು ಪಾಕಿಸ್ತಾನ ಆರ್ಮಿ ಎನ್ನಬೇಕೇ? ಎಂದು ಪ್ರಶ್ನಿಸಿದ್ದಾರೆ.

ಭಯೋತ್ಪಾದಕ ಭಯೋತ್ಪಾದಕ ಎಂದು ಹೇಳುವ ಬದಲು, ನಾವು ಪಾಕಿಸ್ತಾನ ಸೇನೆ, ಪಾಕಿಸ್ತಾನ ಸೇನೆ ಎಂದು ಹೇಳಬೇಕು. ಈ ಇದರ ಭಾಗವಾಗಿರುವುದರಿಂದ ಭಾರತೀಯ ಸೇನೆಯ ಭಾಗವಾಗಿರುವುದರಿಂದ, ಮಾಜಿ ಮೇಜರ್ ಆಗಿರುವುದರಿಂದ ನನಗೆ ಅದು ಅನಿಸುತ್ತದೆ ಇನ್ನು ಮಾಡಿಬಿಡಬೇಕು. ನಮ್ಮಲ್ಲಿ ಗಣನೀಯ ಪಡೆಗಳಿವೆ. ನಮ್ಮಲ್ಲಿ 15,೦೦,೦೦೦ ಕ್ಕೂ ಹೆಚ್ಚು ಪಡೆಗಳಿಲ್ಲವೇ? ಆಗಲೇಬೇಕು. ನೀವು ಅಷ್ಟೊಂದು ಯೋಚಿಸಬಾರದು ಎಂದಿದ್ದಾರೆ.

ಅವರನ್ನು ಮುಗಿಸಿ. ನೀವು ಯಾವ ಧರ್ಮದವರು ಸಹೋದರ? ಯಾವ ಪುಸ್ತಕದಲ್ಲಿ ಮುಗ್ಧರನ್ನು ನೀವು ಕೊಲ್ಲಬಹುದು ಬರೆದಿದೆ? ಅಮಾಯಕ ಜನರನ್ನು ಕೊಲ್ಲಬಹುದು ಎಂದು ಎಲ್ಲಿ ಹೇಳಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಆದ್ದರಿಂದ ನಾವು ಇದನ್ನು ಭಯೋತ್ಪಾದನೆ ಅದು ಇದು ಅಂತ ನಮ್ಮ ತಲೆ ಕೆಡಿಸಿಕೊಳ್ಳಬಾರದು. ಅದು ಪಾಕಿಸ್ತಾನ ಸೇನೆ, ಮತ್ತು ನಮ್ಮ ಸೇನೆಯು ಸುಸಜ್ಜಿತವಾಗಿದೆ, ಉತ್ತಮ ತರಬೇತಿ ಪಡೆದಿದೆ, ಆದೇಶಗಳನ್ನು ಸ್ವೀಕರಿಸಲು ಸಿದ್ಧತೆ ಇರಬೇಕು. ಇವುಗಳನ್ನು ಹಗುರವಾಗಿ ಪರಿಗಣಿಸಬಾರದು. ಇವರದ್ದು ಪೂರ್ತಿ ಜಿಹಾದಿ ಗೇಮ್. ಇಡೀ ಆಟವೇ ಜಿಹಾದಿ. ಅವರಿಗೆ ಭಾರತೀಯರು ಇಷ್ಟವಿಲ್ಲ, ಅವರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಅಷ್ಟೆ, ಅವರಿಗೆ ಭಾರತೀಯರು ಇಷ್ಟವಿಲ್ಲ. ನಾವು ಇದನ್ನು ಮಾತುಕತೆ ನಡೆಸುವುದು ಆಗಲ್ಲ, ನಾವು ಮಾತುಕತೆ ನಡೆಸುತ್ತಲೇ ಇದ್ದೇವೆ. ಅದು ಹಾಗೆಯೇ ಇರುತ್ತದೆ. ಮಾತುಕತೆಗಳು ನಡೆಯುತ್ತಾ 75 ವರ್ಷಗಳಿಗೂ ಹೆಚ್ಚು ಸಮಯವಾಗಿದೆ, ಇದೀಗ ಇದನ್ನು ಕೊನೆಗೊಳಿಸೋಣ ಎಂದಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment