SUDDIKSHANA KANNADA NEWS/ DAVANAGERE/ DATE:21-01-2025
ಬೆಂಗಳೂರು: ಭ್ರಷ್ಟ ಕಾಂಗ್ರೆಸ್ಸಿಗರೆ, ಗಾಂಧಿ-ಅಂಬೇಡ್ಕರ್-ಸಂವಿಧಾನದ ಹೆಸರಿನಲ್ಲಿ ಸಮಾವೇಶ ಮಾಡುತ್ತಿರುವ ನೀವು ಎಂಟು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಬಿಜೆಪಿ ಕೇಳಿದೆ. ಉತ್ತರಿಸುವ ಧೈರ್ಯ ತೋರುತ್ತಿರಾ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಮಹಾತ್ಮ ಗಾಂಧೀಜಿಯವರ ಕಾಂಗ್ರೆಸ್ ವಿಸರ್ಜನೆಯ ಕನಸನ್ನು ಇನ್ನೂ ಏಕೆ ನನಸು ಮಾಡಿಲ್ಲ..?? ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಂತಿಮ ಸಂಸ್ಕಾರಕ್ಕೆ ದೆಹಲಿಯಲ್ಲಿ ಏಕೆ ಸ್ಥಳ ನೀಡಲಿಲ್ಲ..?? ಸಂವಿಧಾನಕ್ಕೆ
ಸಂಪೂರ್ಣ ವಿರುದ್ಧವಾಗಿ ಭಾರತದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಏಕೆ..?? ಎಂದು ಬಿಜೆಪಿ ಪ್ರಶ್ನಿಸಿದೆ.
ನೆಹರು-ಗಾಂಧಿ ಕುಟುಂಬಕ್ಕೆ ಭಾರತ ರತ್ನ ನೀಡಿದ ನೀವು ಅಂಬೇಡ್ಕರ್ ಅವರಿಗೆ ಏಕೆ ಭಾರತ ರತ್ನ ನೀಡಲಿಲ್ಲ..?? ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ವ್ಯಕ್ತಿಗೆ ಪದ್ಮಪ್ರಶಸ್ತಿ ನೀಡಿದ್ದು ಏಕೆ..?? .ಚುನಾವಣೆಯಲ್ಲಿ ನೆಹರು ಅವರು ಅಂಬೇಡ್ಕರ್ ಅವರ ವಿರುದ್ಧ ಪ್ರಚಾರ ಮಾಡಿದ್ದು ಏಕೆ..?? ಯಾವ ಕಾರಣಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಚುನಾವಣೆಯಲ್ಲಿ ಸೋಲಿಸಿತು..?? ಎಂದು ಪ್ರಶ್ನಿಸಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನಕ್ಕೆ 75 ಬಾರಿ ತಿದ್ದುಪಡಿ ಮಾಡಿದ್ದು ಏಕೆ..?? ಬೆಳಗಾವಿಯಲ್ಲಿ ನಿಮ್ಮ ಟೂಲ್ ಕಿಟ್ ಭಾಷಣಗಳನ್ನು ಆರಂಭಿಸುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕೇಳಿದೆ.