SUDDIKSHANA KANNADA NEWS/ DAVANAGERE/ DATE-02-06-2025
ದಾವಣಗೆರೆ: ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜಲಾಶಯದ ನೀರಿನ ಮಟ್ಟ 142.1 ಅಡಿಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 25 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ.
ಕಳೆದ ವರ್ಷವರುಣ ಅಬ್ಬರಿಸಿ ಬೊಬ್ಬಿರಿದ ಕಾರಣ ಭದ್ರಾ ಜಲಾಶಯವು ಎರಡರಿಂದ ಮೂರು ಬಾರಿ ಭರ್ತಿಯಾಗಿತ್ತು. ಬೇಸಿಗೆ ಕಾಲ ಬಂದರೂ ಜಲಾಶಯದಲ್ಲಿ ನೀರು ಸಂಗ್ರಹವಾಗಿತ್ತು. ನಿಯಮಿತವಾಗಿ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಲ್ಲಿ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿದೆ. ಕಳೆದ ಒಂದು ವಾರದಿಂದ ಮಳೆ ಸುರಿದ ಕಾರಣ ಜಲಾಶಯಕ್ಕೆ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈಗ ಮತ್ತೆ ಮಳೆ ಕಡಿಮೆಯಾಗಿದ್ದು, ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ಕುಂಠಿತವಾಗಿದೆ.
ಭದ್ರಾ ಜಲಾಶಯಕ್ಕೆ ಇಂದು ಬರುತ್ತಿರುವ ಒಳಹರಿವು 3055 ಕ್ಯೂಸೆಕ್ ಇದ್ದರೆ, ಹೊರ ಹರಿವು 347 ಕ್ಯೂಸೆಕ್ ಇದೆ.
142 ಅಡಿ ನೀರು ದಾಟಿರುವುದು ಭದ್ರಾ ಜಲಾನಯನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ರೈತರು ಹಾಗೂ ಜನರ ಖುಷಿಗೂ ಕಾರಣವಾಗಿದೆ. ಮಳೆಗಾಲ ಇನ್ನೂ ಆರಂಭವಾಗಿಲ್ಲ. ಆದಾಗಲೇ ಜಲಾಶಯವು 142 ಅಡಿ ಗಡಿ ದಾಟಿರುವುದು ಒಳ್ಳೆಯದು ಎನ್ನುತ್ತಾರೆ ರೈತರು.
ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಕುಂಠಿತವಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಡ್ಯಾಂಗೆ ಬರುತ್ತಿರುವ ಒಳಹರಿವು ಪ್ರಮಾಣ ಕಡಿಮೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮತ್ತು
ಭದ್ರಾ ಜಲಾನಯನ ಪ್ರದೇಶದಲ್ಲಿ ವರುಣಾರ್ಭಟ ಕಡಿಮೆ ಆಗಿದ್ದು, ಜಲಾಶಯಕ್ಕೆ ಬರುತ್ತಿರುವ ಇಂದಿನ ಒಳಹರಿವು 3055 ಕ್ಯೂಸೆಕ್ ಇದೆ. ಹೊರ ಹರಿವು 347 ಕ್ಯೂಸೆಕ್ ಇದೆ.
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 142.1 ಅಡಿಗೆ ಏರಿಕೆ ಆಗಿದ್ದು, ಕಳೆದ ವರ್ಷ ಇದೇ ದಿನ ಡ್ಯಾಂನ ನೀರಿನ ಮಟ್ಟ 117.3 ಅಡಿ ನೀರು ಸಂಗ್ರಹವಾಗಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 25 ಅಡಿಗೂ ಹೆಚ್ಚು ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ ಭಾರೀ ಮಳೆಯಾದ ಕಾರಣ ಡ್ಯಾಂ ತುಂಬಿತ್ತು. ಅವಧಿ ಪೂರ್ವ ಮುಂಗಾರು ಎಂಟ್ರಿ ಕೊಟ್ಟಿರುವುದರಿಂದ ಈ ಬಾರಿಯೂ ಡ್ಯಾಂ ತುಂಬುವ ನಿರೀಕ್ಷೆ ರೈತಾಪಿ ವರ್ಗದಲ್ಲಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ. ಮಳೆ ಆಗುತ್ತಿರುವುದರಿಂದ ಭದ್ರಾ ಜಲಾನಯನ ಪ್ರದೇಶ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ
ಇಂದಿನ ನೀರಿನ ಮಟ್ಟ: 142.1 ಅಡಿ
ಒಳ ಹರಿವು: 3055 ಕ್ಯೂಸೆಕ್
ಹೊರ ಹರಿವು: 347 ಕ್ಯೂಸೆಕ್
ಭದ್ರಾ ಎಡ, ಬಲದಂಡೆ ನಾಲೆ: ಒಟ್ಟು 80 ಕ್ಯೂಸೆಕ್
ಇತರೆ: 200 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 117.3 ಅಡಿ
ಕೆಪಾಸಿಟಿ: 14.319 ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ: 186 ಅಡಿ