SUDDIKSHANA KANNADA NEWS/ DAVANAGERE/ DATE-05-05-2025
ದಾವಣಗೆರೆ: ಮಹಾನಗರಪಾಲಿಕೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ಪಾಲಿಕೆಯ ಯಾವುದೇ ಅಧಿಕಾರಿ, ಸಿಬ್ಬಂದಿಗಳು ಹಣ ನೀಡುವಂತೆ ಅಥವಾ ಒತ್ತಾಯ ಮಾಡಿರುವುದು ಇಲ್ಲಿಯವರೆಗೆ ಯಾವುದೇ ದೂರುಗಳು ಕಚೇರಿಗೆ ಸ್ವೀಕೃತಿಯಾಗಿರುವುದಿಲ್ಲ.
ಒಂದು ವೇಳೆ ಪಾಲಿಕೆಯಲ್ಲಿನ ಯಾವುದೇ ಅಧಿಕಾರಿ, ಸಿಬ್ಬಂದಿಗಳು ಹಣವನ್ನು ನೀಡುವಂತೆ ಕೋರಿರುವುದು ಹಣವನ್ನು ಪಡೆದಿರುವುದು ದಾಖಲೆಗಳೊಂದಿಗೆ ನೇರವಾಗಿ ಮಹಾನಗರಪಾಲಿಕೆಯ ಆಯುಕ್ತರಿಗೆ ಖುದ್ದಾಗಿ ದೂರು ಸಲ್ಲಿಸಿದಲ್ಲಿ, ಅಂತಹವರ ವಿರುದ್ದ ನಿಯಮಾನುಸಾರ ಶಿಸ್ಸು ಕ್ರಮ ಜರುಗಿಸಲಾಗುವುದು.
ಹಾಗೇ ಮಧ್ಯವರ್ತಿಗಳು ಹಣಪಡೆದಲ್ಲಿ ಅಂತವರ ವಿರುದ್ದ ನೇರವಾಗಿ ನ್ಯಾಯಾಲಯಕ್ಕೆ ದೂರು ದಾಖಲಿಸಬಹುದೆಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.