SUDDIKSHANA KANNADA NEWS/ DAVANAGERE/ DATE:25-02-2025
ದಾವಣಗೆರೆ: ಕಳ್ಳತನ ಆದ 24 ಗಂಟೆಯೊಳಗೆ ಆರೋಪಿ ಹಿಡಿಯುವಲ್ಲಿ ವಿದ್ಯಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ಮಾಡಿದ್ದ ನಗದು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ತಾಲೂಕಿನ ಬಳ್ಳೂರು ಗ್ರಾಮದ ವಾಸಿ ಎಸ್. ಷರೀಫ್ ಸಾಬ್ (33) ಬಂಧಿತ ಆರೋಪಿ. ಕಳ್ಳತನ ಮಾಡಿದ 7,36,630 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಫೆಬ್ರವರಿ 24ರಂದು ಮದ್ಯಾಹ್ನ 12.30ಕ್ಕೆ ನಾರಾಯಣ ಹೃದಯಾಲಯದ ಫೆಸಿಲಿಟಿ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುನಿಲ್ ಭಂಡಾರಿಗಲ್ ಅವರು ವಿದ್ಯಾ ನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.
ಫೆ. 22ರಂದು ಸಂಜೆ 5.45 ಗಂಟೆಗೆ ನಮ್ಮ ಅಕೌಂಟ್ಸ್ ವಿಭಾಗದ ಮೋಹನ್ ಅವರು ಆ ದಿನ ರೋಗಿಗಳಿಂದ ಸಂಗ್ರಹವಾದ ಹಣವನ್ನು ನಮ್ಮ ಅಕೌಂಟ್ಸ್ ರೂಮಿನ ಗಾಡ್ರೇಜ್ ಬೀರುವನಲ್ಲಿ ಲಾಕರ್ ನಲ್ಲಿ ಇಟ್ಟು ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಆದ್ರೆ, 24ರಂದು ಬೆಳಿಗ್ಗೆ 9ಗಂಟೆಗೆ ಆಪೀಸಿಗೆ ಬಂದು ಬೀಗ ತೆಗೆದು ಒಳಗೆ ಹೋದಾಗ ಅಕೌಂಟ್ಸ್ ರೂಮಿನ ಬಾಗಿಲು ಬೀಗ ಮುರಿದಿತ್ತು.
ಮೋಹನ್ ಅವರು ಒಳಗೆ ಹೋಗಿ ಗಾಡ್ರೇಜ್ ಬೀರುವನ್ನು ಚೆಕ್ ಮಾಡಿ ನೋಡಿದಾಗ ಗಾಡ್ರೇಜ್ ಬೀರುವಿನ ಬಾಗಿಲು ತೆಗೆದಿದ್ದು, ಲಾಕರ್ನಲ್ಲಿ ಇಟ್ಟಿದ್ದ 7,43,626 ರೂಪಾಯಿ ಕಾಣಿಸಲಿಲ್ಲ. ಆಗ ನನಗೆ ಮಾಹಿತಿ ತಿಳಿಸಿದಾಗ ನಾನು ಅಕೌಂಟ್ಸ್ ರೂಮಿಗೆ ಹೋಗಿ ನೋಡಲಾಗಿ ಗಾಡ್ರೇಜ್ ಬೀರುವಿನ ಬಾಗಿಲು ತೆರೆದಿದ್ದು, ಗಾಡ್ರೇಜ್ ನಲ್ಲಿ ಇಟ್ಟಿದ್ದ ಲಾಕರ್ ಬಾಗಿಲು ಓಪನ್ ಆಗಿರುವುದು ಕಂಡು ಬಂದಿತು.
ಅದರಲ್ಲಿ ಇಟ್ಟಿದ್ದ ನಗದು ಹಣ ಕಾಣಿಸಲಿಲ್ಲ. ಯಾರೋ ಕಳ್ಳರು ಅಕೌಂಟ್ಸ್ ರೂಮಿನ ಬಾಲ್ಕನಿ ಬಾಗಿಲನ್ನು ಯಾವುದೋ ಆಯುಧದಿಂದ ಮುರಿದು ರೂಮಿನ ಒಳಗೆ ಪ್ರವೇಶ ಮಾಡಿ ಲಾಕರನಲ್ಲಿ ಇಟ್ಟಿದ್ದ 7,43,626 ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದರು.
ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ. ಎಸ್. ಹಾಗೂ ಪಿಎಸ್ಐ ವಿಜಯ ಎಂ., ನಾಗರಾಜ್ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾಧವ್, ಆನಂದ ಎಮ್, ಚಂದ್ರಪ್ಪ, ಬೋಜಪ್ಪ, ರವರನ್ನು ಒಳಗೊಂಡ ತಂಡವು ಪ್ರಕರಣದಲ್ಲಿ ಆರೋಪಿತನಾದ ಎಸ್. ಷರೀಪ್ ಸಾಬ್ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯೊಳಗೆ ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ಇನ್ಸಪೆಕ್ಟರ್ ಇಸ್ಮಾಯಿಲ್ ಬಿ. ಹಾಗೂ ಸಿಬ್ಬಂದಿಗಳಾದ ನಾಗರಾಜ ಕುಂಬಾರ ಹಾಗು ವೀರೇಶ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.