SUDDIKSHANA KANNADA NEWS/ DAVANAGERE/ DATE:14-01-2025
ದಾವಣಗೆರೆ: ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ರಂಗಸ್ವಾಮಿ ಟಿ. ಎನ್. ಮೈಕಲ್ ರಂಗ ಎಂಬಾತನನ್ನು ಬಂಧಿಸಲಾಗಿದೆ.
ಘಟನೆ ಹಿನ್ನೆಲೆ:
ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ವಾಸಿಯಾದ ಹನುಮಂತಪ್ಪ ಎಂಬುವವನ 1ನೇ ಹೆಂಡತಿ ಆಶಾ ಮತ್ತು ಮಕ್ಕಳು ಜಮೀನಿನಲ್ಲಿ ಪಾಲು ಕೊಡಲಿಲ್ಲವೆಂದು ಆಶಾಳು ತನ್ನ ಅಣ್ಣ ರಂಗಸ್ವಾಮಿ, ಮಗ ಲಿಖಿತ್, ತನ್ನ ತಂದೆ ವಿ.ಟಿ ನಾಗರಾಜಪ್ಪ ಸೇರಿ ಹನುಮಂತಪ್ಪನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು.
ಆ ಸಂಚಿನಂತೆ ರಂಗಸ್ವಾಮಿಯು 2024ರ ನವೆಬಂರ್ 28ರಂದು ಬೆಳಿಗ್ಗೆ ಸುಮಾರು7 ಗಂಟೆ ಸಮಯದಲ್ಲಿ ಅಜ್ಜಿಹಳ್ಳಿ ಗ್ರಾಮದ ಮುಂದಿನ ರಸ್ತೆಯಲ್ಲಿ ರಂಗಸ್ವಾಮಿಯು ಬೈಕಿನಲ್ಲಿ ಹನುಮಂತಪ್ಪನನ್ನು ಹಿಂಬಾಲಿಸಿಕೊಂಡು ಹೋಗಿ ಮಚ್ಚಿನಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಹನುಮಂತಪ್ಪನನ್ನು ಕೊಲೆ ಮಾಡಿ ಎಸ್ಕೆಪ್ ಆಗಿದ್ದ ರಂಗಸ್ವಾಮಿ.ಟಿ.ಎನ್ . ಮೈಕಲ್ ರಂಗ ಸಿಕ್ಕಿರಲಿಲ್ಲ. ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ ಮೊದಲ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.