SUDDIKSHANA KANNADA NEWS/ DAVANAGERE/ DATE-29-04-2025
ದಾವಣಗೆರೆ: ಚನ್ನಗಿರಿ ಜನಸೇವಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ., ಚನ್ನಗಿರಿ ಮತ್ತು ಸರ್ವೇಶ್ವರ ಸೌಹಾರ್ದ ಸಹಕಾರಿ ನಿ, ದಾವಣಗೆರೆ. ಇವರು ಉದ್ದೇಶಿತ ಕಾರ್ಯಚಟುವಟಿಕೆಗಳನ್ನು ನಿರ್ವಹಿಸದೇ ಸ್ಥಗಿತಗೊಂಡ ಕಾರಣ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಬೆಂಗಳೂರು ಇವರು ಈ ಸೌಹಾರ್ದ ಸಹಕಾರಿ ಸಂಘಗಳನ್ನು ಸಮಾಪನೆಗೊಳಿಸಲು ಶಿಫಾರಸ್ಸು ಮಾಡಿರುತ್ತಾರೆ.
ಆದ್ದರಿಂದ ಈ ಸೌಹಾರ್ದ ಸಹಕಾರಿ ಸಂಘಗಳನ್ನು ಕರ್ನಾಟಕ ಸೌಹಾರ್ದ ಸಹಕಾರಿ ಸಂಘಗಳ ಅಧಿನಿಯಮನ್ವಯ ಏಕೆ ಸಮಾಪನೆಗೊಳಿಸಬಾರದು ಎಂಬುವುದಕ್ಕೆ 7 ದಿನಗಳೊಳಗಾಗಿ ಸಂಘಗಳ ಕಾರ್ಯದರ್ಶಿಯವರಿಂದ, ಸದಸ್ಯರಿಂದ ಅಥವಾ ಯಾರಿಂದಲಾದರೂ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಈ ಕಚೇರಿಗೆ ಸಲ್ಲಿಸಲು, ಇಲ್ಲವಾದಲ್ಲಿ ಈ ಸೌಹಾರ್ದ ಸಹಕಾರಿ ಸಂಘಗಳನ್ನು ನಿಯಮಾನುಸಾರ ಸಮಾಪನೆಗೆ ಕ್ರಮವಹಿಸಲಾಗುವುದೆಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.